ಬಿಹಾರಿ ಕಾರ್ಮಿಕನ ಡೇಂಜರ್ ಟ್ರಾವೆಲ್ ಹಿಸ್ಟರಿ-ಅರ್ಧ ಬೆಂಗಳೂರು ಸುತ್ತಾಟ

-ಕೆ.ಆರ್.ಪುರಂ ಮಹಿಳೆಗೆ ಕೊರೊನಾ

ಬೆಂಗಳೂರು: ನಂಜನಗೂಡು ನೌಕರನ ಮಾದರಿ ಬೆಂಗಳೂರಿಗೂ ಹೊಂಗಸಂದ್ರದ ಸೋಂಕಿತ ಕೂಲಿ ಕಾರ್ಮಿಕನಿಂದ ಕಂಟಕ ಎದುರಾಗಿದೆ. ಕೂಲಿ ಕಾರ್ಮಿಕನಿಂದ ಇಂದೂ ಐವರಿಗೆ ಸೋಂಕು ಹರಡಿರುವುದು ಧೃಡಪಟ್ಟಿದ್ದು, ಈವರೆಗೂ ಈತನೊಬ್ಬನಿಂದಲೇ ಬೆಂಗಳೂರಿನ 14 ಮಂದಿಗೆ ಕೊರೊನಾ ತಗುಲಿದೆ.

ಬಿಹಾರ ಮೂಲದ ಕೂಲಿ ಕಾರ್ಮಿಕನ ಟ್ರಾವೆಲ್ ಹಿಸ್ಟರಿ ಬಯಲಾಗುತ್ತಿದ್ದಂತೆ ಅರ್ಧ ಬೆಂಗಳೂರಿಗೆ ಈತ ಸೋಂಕು ಹಂಚಿರುವ ಸಾಧ್ಯತೆ ದಟ್ಟವಾಗಿದೆ. ಬೆಂಗಳೂರಿನ ಯಾವೆಲ್ಲಾ ಜಾಗಗಳಿಗೆ ಸೋಂಕಿತ ಹೋಗಿದ್ದ, ಯಾರೊಂದಿಗೆಲ್ಲಾ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಅರ್ಧ ಬೆಂಗಳೂರು ಸುತ್ತಾಟ: ರೋಗಿ ನಂಬರ್ 419, ಬಿಹಾರ ಮೂಲದ ಕಾರ್ಮಿಕ ಮೊದಲಿಗೆ ನಾಲ್ಕು ಆಸ್ಪತ್ರೆಗಳಿಗೆ ಹೋಗಿದ್ದನು ಎಂದು ಹೇಳಲಾಗಿತ್ತು. ಆದ್ರೆ ಕಾರ್ಮಿಕ ಕಲಾಸಿಪಾಳ್ಯ, ಕಾಟನ್‍ಪೇಟೆ, ಕೆ.ಆರ್ ಮಾರ್ಕೆಟ್‍ನಲ್ಲೂ ಓಡಾಟ ನಡೆಸಿದ್ದಾನೆ. ತನ್ನ ಬಿಹಾರದ ಸ್ನೇಹಿತರ ಜೊತೆ ಅರ್ಧ ಬೆಂಗಳೂರು ಸುತ್ತಾಡಿದ್ದಾನೆ. ಹಣ್ಣು ಮತ್ತು ತರಕಾರಿಗಾಗಿ ಸಿಂಗಸಂದ್ರಕ್ಕೂ ಹೋಗಿ ಬಂದಿದ್ದಾನೆ. ಸ್ನೇಹಿತರು ಉಳಿದುಕೊಂಡಿದ್ದ ಮೆಜೆಸ್ಟಿಕ್ ಬಳಿಯ ಹಿಂದೂಸ್ತಾನ್ ಲಾಡ್ಜ್ ಗೂ ಭೇಟಿ ನೀಡಿದ್ದಾನೆ. ಲಾಡ್ಜ್ ನಲ್ಲಿದ್ದ ಸ್ನೇಹಿತರಿಗೂ ಪಾದರಾಯನಪುರಕ್ಕೂ ಲಿಂಕ್ ಇರುವ ಸಾಧ್ಯತೆಗಳಿವೆ.

ಕೆ.ಆರ್.ಪುರಂ ಮಹಿಳೆಗೆ ಕೊರೊನಾ: ಸೇಫ್‍ಝೋನ್‍ನಲ್ಲಿದ್ದ ಬೆಂಗಳೂರಿನ ಏರಿಯಾಗಳಿಗೂ ಕೊರೊನಾ ವ್ಯಾಪಿಸಿದ್ದು, ಕೆ.ಆರ್.ಪುರಂ ಕ್ಷೇತ್ರದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಫೆಬ್ರವರಿ 20ರಂದೇ ಕೇರಳದಿಂದ ಮಹದೇವಪುರಕ್ಕೆ ಬಂದಿದ್ದ ಮಹಿಳೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಜ್ವರ, ಶೀತ, ತಲೆನೋವು ಕಾಣಿಸಿಕೊಂಡಿತ್ತು. 3 ದಿನಗಳ ಹಿಂದೆ ಸಿ.ವಿ. ರಾಮನ್ ನಗರದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕೊರೊನಾ ಸೋಂಕಿದೆ ಎಂದು ಆರೋಗ್ಯ ಇಲಾಖೆ ಈಗ ಖಚಿತ ಪಡಿಸಿದೆ.

ಮಹಿಳೆಯ ಮಗಳು-ಅಳಿಯ ಸೇರಿದಂತೆ ಕುಟುಂಬದ 6 ಮಂದಿ, ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 20 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತ ಮಹಿಳೆ ವಾಸವಿದ್ದ ಅಪಾರ್ಟ್ ಮೆಂಟ್‍ನ 15 ಫ್ಲ್ಯಾಟ್‍ಗಳಲ್ಲಿ ನೆಲೆಸಿರುವವರಿಗೂ ಆತಂಕ ಎದುರಾಗಿದೆ.

Comments

Leave a Reply

Your email address will not be published. Required fields are marked *