ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

ಧಾರವಾಡ: ಲಾಕ್‍ಡೌನ್ ನಡುವೆ ಆಹಾರ ಅರಸಿ ಮನೆಗೆ ಬಂದಿದ್ದ ಕೋತಿಗಳಿಗೆ ಆಹಾರ ನೀಡುವ ಮೂಲಕ ಧಾರವಾದ ಗೌಸ್ ಖಾನ್ ಮಾನವೀಯತೆ ಮರೆದಿದ್ದಾರೆ.

ಧಾರವಾಡದ ಬಸವನಗರದ ನಿವಾಸಿಯಾದ ಗೌಸ್ ಖಾನ್ ನವಲೂರು ಊಟಕ್ಕೆ ಕುಳಿತಾಗ ಮನೆಗೆ ಇಂದು ಎರಡು ಮಂಗಗಳು ಬಂದಿದ್ದವು. ಮಂಗಗಳನ್ನು ನೋಡಿದ ಗೌಸ್ ಖಾನ್ ಶೇಂಗಾ, ಚಪಾತಿ, ಬಾಳೆಹಣ್ಣು ನೀಡಿದ್ದಾರೆ. ಎಂದು ಬರದ ಮಂಗಗಳು ನಮ್ಮ ಮನೆಗೆ ಬಂದಿದ್ದರಿಂದ ಊಟ ನೀಡಿದ್ದೇವೆ ಎಂದು ಗೌಸ್ ಹೇಳುತ್ತಾರೆ.

ಇಂದು ಶನಿವಾರ ಆಂಜನೇಯನ ವಾರ ಎಂದು ಹೇಳುತ್ತಾರೆ. ಮನೆಗೆ ಅತಿಥಿಗಳ ರೂಪದಲ್ಲಿ ಬಂದಿದ್ದವು. ನಾವು ಮಾಡುತ್ತಿದ್ದ ಊಟವನ್ನೇ ಮಂಗಗಳಿಗೆ ನೀಡಿದ್ದೇವೆ ಎಂದು ಗೌಸ್ ಕುಟುಂಬಸ್ಥರು ಹೇಳುತ್ತಾರೆ. ಇನ್ನು ಮಂಗಗಳು ಬಂದಿರೋದನ್ನು ನೋಡಿದ ಜನ, ಭಾಯಿಜಾನ್ ಮನೆಗೆ ಭಜರಂಗಿಗಳು ಬಂದಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *