ಬಾವಲಿಗಳಲ್ಲೂ ಕೊರೊನಾ ವೈರಸ್- ಐಸಿಎಂಆರ್ ಸಂಶೋಧನೆಯಲ್ಲಿ ಬಹಿರಂಗ

ಬೆಂಗಳೂರು: ನಿಫಾದಿಂದ ಕಂಗೆಡಿಸಿದ್ದ ಬಾವಲಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ವಿಚಾರ ಕರ್ನಾಟಕವನ್ನೂ ಆತಂಕಕ್ಕೀಡು ಮಾಡಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ವಾಕರ್ಸ್ ಗೂ ಈಗ ಬಾವಲಿಯ ಭಯ ಕಾಡುತ್ತಿದ್ದು ಲಾಕ್‍ಡೌನ್ ನಂತ್ರ ವಾಕ್ ಮಾಡೋದಾ ಬೇಡ್ವಾ ಅನ್ನೋ ಚಿಂತೆಯಲ್ಲಿದ್ದಾರೆ.

ಮಹಾಮಾರಿ ಕೊರೊನಾ ವೈರಸ್ ಇಡೀ ಜಗತ್ತಿನ ಜನರ ನಿದ್ದೆಗೆಡಿಸಿದೆ. ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ರಾಜ್ಯ, ರಾಷ್ಟ್ರಗಳು ನಲುಗಿ ಹೋಗಿದೆ. ಇಂತಹ ಹೊತ್ತಲ್ಲೇ ಬಾವಲಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರೋದು ಮತ್ತಷ್ಟು ಭೀತಿ ಸೃಷ್ಟಿಸಿದೆ. ಕರ್ನಾಟಕವೂ ಸೇರಿ 9 ರಾಜ್ಯಗಳ ಬಾವಲಿಗಳನ್ನ ಐಸಿಎಂಆರ್ ಸಂಶೊಧನೆಗೊಳಪಡಿಸಿತ್ತು. ಈ ವೇಳೆ ಬಂದಿರುವ ವರದಿ ನೋಡಿ ರಾಜ್ಯದಲ್ಲೂ ಭೀತಿ ಸೃಷ್ಟಿಯಾಗಿದೆ. ಕೊರೊನಾ ಸೋಂಕು ಬಾವಲಿಗಳಲ್ಲಿ ಕಂಡು ಬಂದಿರುವ ಸಂಶೋಧಕರ ಮಾಹಿತಿಯನ್ನು ಐಸಿಎಂಆರ್ ಜನರಲ್ ಆಫ್ ಮೆಡಿಕಲ್ ರಿಸರ್ಚ್ ನ ಮೊದಲ ಅಧ್ಯಾಯದಲ್ಲಿ ಪ್ರಕಟಿಸಿದೆ. ಕೊರೊನಾ ಸಂಬಂಧ ನಡೆದಿರುವ ಸಂಶೋಧನೆ ಮತ್ತು ಪರೀಕ್ಷಾ ಹಂತಗಳನ್ನು ಇಲ್ಲಿ ವಿವರಿಸಲಾಗಿದೆ. ಕೊರೊನಾ ಸೋಂಕು ಬಾವಲಿಯಲ್ಲಿ ಕಂಡು ಬಂದಿದೆ ಎನ್ನುವುದರ ಬಗ್ಗೆ ಇಲ್ಲಿ ಉಲ್ಲೇಖಿಸಿಲಾಗಿದೆ.

ಈ ವರದಿ ಕಬ್ಬನ್ ಪಾರ್ಕಿನಲ್ಲಿ ವಾಕ್ ಮಾಡುತ್ತಿದ್ದ ಜನರ ನಿದ್ದೆಗೆಡಿಸಿದೆ. ಲಾಕ್‍ಡೌನ್ ನಂತ್ರ ಹೇಗೆ ಅಲ್ಲಿ ವಾಕ್ ಮಾಡೋದು ಅನ್ನೋ ಭಯ ಕಾಡುತ್ತಿದೆ. ಕಬ್ಬನ್ ಪಾರ್ಕಿನಲ್ಲಿ ಹೇರಳವಾಗಿ ಬಾವಲಿಗಳು ಇದ್ದು ಇದರಿಂದ ಕೊರೊನಾ ವೈರಸ್ ಸೋಂಕು ತಗುಲಿದ್ರೆ ಹೇಗೆ ಅನ್ನೋ ಚಿಂತೆ ಕಾಡಿದೆ. ಅದಕ್ಕಾಗಿ ಬಾವಲಿಗಳಿಂದ ಸೋಂಕು ಹರಡದಂತೆ ಇಡೀ ಕಬ್ಬನ್ ಪಾರ್ಕಿಗೆ ಔಷಧಿ ಸಿಂಪಡಿಸಿ ಎಂದು ಸರ್ಕಾರಕ್ಕೆ ಮನವಿ ಪತ್ರ ನೀಡಲು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್‍ನ ಸದಸ್ಯರು ನಿರ್ಧರಿಸಿದ್ದಾರೆ.

ನಿಫಾ ವೈರಸ್ ಮಾದರಿಯಲ್ಲೇ ಪ್ರಾಣಿಗಳಿಂದ ಮನುಷ್ಯನಿಗೆ ಕೊರೊನಾ ಸೋಂಕು ಬರಬಹುದು ಎಂಬ ಆತಂಕ ಶುರುವಾಗಿದೆ. ಈಗೇನಾದ್ರೂ ಬಾವಲಿಗಳಿಂದ ಕೊರೊನಾ ಮನುಷ್ಯನಿಗೆ ಹರಡಲು ಆರಂಭವಾದ್ರೆ ಅದರ ಪ್ರಭಾವ, ತೀವ್ರತೆ ಹೆಚ್ಚಾಗಲಿದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಮುಂಜಾಗ್ರತೆಯ ಕ್ರಮ ಕೈಗೊಳ್ಳಬೇಕಿದೆ.

Comments

Leave a Reply

Your email address will not be published. Required fields are marked *