ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

– ತೆಲಂಗಾಣದಲ್ಲಿ ಪ್ರೋತ್ಸಾಹ ಧನ, ರಾಜ್ಯದಲ್ಲಿ ಸಂಬಳ ನೀಡಬೇಕಾ?
– ಅಸುರಕ್ಷತೆಯಲ್ಲೆ ಹಗಲಿರುಳು ದುಡಿಯುವರನ್ನ ಕೇಳುವವರಿಲ್ಲ

ರಾಯಚೂರು: ಕೊವಿಡ್ 19 ನಿಯಂತ್ರಣಕ್ಕೆ ಒಂದು ದಿನದ ಸಂಬಳ ಕಟ್ ಮಾಡಲಾಗುವುದು. ಯಾರದಾದರೂ ನಿರಾಕರಿಸುತ್ತಿದ್ದರೆ ತಿಳಿಸಿ ಅಂತ ಹೇಳಿದ್ದ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಠಾಣಾ ಪಿಎಸ್ ಐ ಮೂಲಕ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನಿರಾಕರಿಸಿ ಪತ್ರ ಬರೆದಿದ್ದಾರೆ. ಮಾರ್ಚ್ ತಿಂಗಳ ಒಂದು ದಿನದ ಸಂಬಳ ನೀಡಲು ಸರ್ಕಾರ ಕೋರಿತ್ತು. ಆದರೆ ಹಗಲಿರುಳು ರಜೆಯಿಲ್ಲದೆ ಕೊವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಸೌಲಭ್ಯಗಳಿಲ್ಲದೆ ನಾವು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಯಾರೊಬ್ಬರು ಸಹಾಯ ಮಾಡಿಲ್ಲ. ತೆಲಂಗಾಣ ಸರ್ಕಾರ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷತೆ ಜೊತೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳ ಸಂಬಳ ಬೇಕಾದರೆ ಕಡಿತ ಮಾಡಿ. ಆದರೆ ನಮ್ಮ ಸಂಬಳ ಕಡಿತ ಮಾಡಬೇಡಿ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ.

ರಾಯಚೂರು ಮಾತ್ರವಲ್ಲದೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಗಳ ಪೊಲೀಸರು ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನೀರಾಕರಿಸುವ ಮೂಲಕ ಸಮರ್ಪಕವಾಗಿ ಔರಾದ್ಕರ್ ವರದಿ ಜಾರಿಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *