ಮಾದಪ್ಪನ ಸನ್ನಿಧಿಯಲ್ಲಿ ಉಳಿದಿದೆ 70 ಸಾವಿರ ಲಡ್ಡು

ಚಾಮರಾಜನಗರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾದಪ್ಪನ ಬೆಟ್ಟದಲ್ಲಿ ಭಕ್ತರಿಗಾಗಿ ತಯಾರಾದ ಲಾಡುಗಳು ಆಗೆ ಉಳಿದಿರುವ ಘಟನೆ ಇಂದು ನಡೆದಿದೆ.

ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಕೈ ತಲುಪದೆ ಸುಮಾರು 70 ಸಾವಿರ ಲಾಡುಗಳು ಉಳಿದಿದೆ. ಭಕ್ತರಿಗೆ ಪ್ರವೇಶ ನಿಷೇಧ ಹಿನ್ನೆಲೆ ಈಗಾಗಲೇ ಮಲೆ ಮಾದಪ್ಪನ ಸನ್ನಿಧಿ ಸಂಪೂರ್ಣ ಸ್ಥಬ್ದಗೊಂಡಿದೆ.

ಭಕ್ತರಿಗೆ ವಿತರಿಸಲೆಂದು ಲಾಡುಗಳು ತಯಾರಾಗಿದ್ದವು. ಇದೀಗ ಎಲ್ಲಾ ದೇವಾಲಯಗಳಲ್ಲಿ ಭಕ್ತರಿಗೆ ನಿಷೇಧ ಹೇರಿರುವುದರಿಂದ ಲಾಡುಗಳು ಹಾಗೆಯೇ ಉಳಿದಿದೆ ಅಂತಾ ತಿಳಿದುಬಂದಿದೆ. ಮಹದೇಶ್ವರ ಬೆಟ್ಟದ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಇತ್ತ ಗಮನಹರಿಸಬೇಕಾಗಿದೆ. ಅಲ್ಲದೆ ಎಂಎಂ ಹಿಲ್ಸ್ ಪ್ರಾಧಿಕಾರದ ಜಯವಿಭವಸ್ವಾಮಿ ಸಿಎಂ ಜೊತೆಗೆ ಚರ್ಚಿಸಿ ಲಾಡು ವಿಲೇವಾರಿ ಹೇಗೆ ಮಾಡಬೇಕೆಂದು ನಿರ್ಧರಿಸಬೇಕಾಗಿದೆ.

ಇಬ್ಬರ ಗಂಟಲು ದ್ರವ, ರಕ್ತ ಮಾದರಿ ಪರೀಕ್ಷೆಗೆ ರವಾನೆ:
ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬಂದ ಇಬ್ಬರು ಶಂಕಿತ ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅವರಿಬ್ಬರು ಕೂಡ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆಯಿಲ್ಲ. ಮುನ್ನೆಚ್ಚರಿಕೆಯ ದೃಷ್ಟಿಯಿಂದ ರಕ್ತ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿ ಎಂ.ಆರ್ ರವಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮೂವರ ರಕ್ತದ ಮಾದರಿ ಪರೀಕ್ಷೆ ವರದಿ ಬಂದಿದ್ದು ನೆಗೆಟಿವ್ ಎಂದು ತಿಳಿದುಬಂದಿದೆ. ನೆಗೆಟಿವ್ ಬಂದ ವ್ಯಕ್ತಿಗಳು 14 ದಿನದ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿರೋ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ 12 ಮಂದಿ ಈಗಾಗಲೇ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, 23 ಮಂದಿಗೆ ಹೋಮ್ ಕ್ವಾರಂಟೈನ್ ಮುಂದುವರಿದಿದೆ ಎಂದು ಡಿಸಿ ಎಂ.ಆರ್ ರವಿ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *