ನಿಮ್ಗೆ ವಯಸ್ಸಾಗಿದೆ, ಐಸೋಲೇಷನ್ ವಾರ್ಡ್‍ಗೆ ಹೋಗ್ಬೇಡಿ ಎಂದು ಸಚಿವ ಸೋಮಣ್ಣ ತಡೆದ ಪ್ರತಾಪ್ ಸಿಂಹ

ಮೈಸೂರು: ನಿಮಗೆ ವಯಸ್ಸಾಗಿದೆ ಎಂದು ಐಸೋಲೇಷನ್ ವಾರ್ಡ್‍ಗೆ ತೆರಳುತ್ತಿದ್ದ ಸಚಿವ ವಿ. ಸೋಮಣ್ಣ ಅವರನ್ನು ಸಂಸದ ಪ್ರತಾಪ್ ಸಿಂಹ ತಡೆದ ಪ್ರಸಂಗ ನಡೆಯಿತು.

ಇಂದು ಮೈಸೂರಿನಲ್ಲಿ ಕೊರೊನಾ ಐಸೋಲೇಷನ್ ಆಸ್ಪತ್ರೆಗೆ ಸಚಿವರು ಭೇಟಿ ನೀಡಿದರು. ಐಸೋಲೇಷನ್ ವಾರ್ಡ್ ಇರುವ ಜಯದೇವ ಆಸ್ಪತ್ರೆ ಹಳೆ ಕಟ್ಟಡಕ್ಕೆ ಭೇಟಿ ನೀಡುತ್ತಿದ್ದ ವೇಳೆ ಸಚಿವರನ್ನು ಸಂಸದರು ತಡೆದರು.

ನಿಮಗೆ ವಯಸ್ಸಾಗಿದೆ. ಹೀಗಾಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ಹೋಗಬೇಡಿ ಎಂದರು. ಅಲ್ಲದೆ ಸೋಮಣ್ಣರ ಕೈ ಹಿಡಿದು ಬೇಡ ಸರ್ ಹೋಗಬೇಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಸಚಿವರು, ನಾನು ಹೋಗಲ್ಲ, ಇಲ್ಲೇ ಇರುತ್ತೀನಿ ಬಿಡು. ನಾನು ಇನ್ನೂ ಬಹಳ ವರ್ಷ ಬದುಕುತ್ತೇನೆ ಯೋಚನೆ ಮಾಡಬೇಡ ಎಂದು ಐಸೋಲೇಷನ್ ವಾರ್ಡ್‍ಗೆ ಭೇಟಿ ನೀಡದೆ ವಾಪಸ್ಸಾದರು.

ಮಹಾಮಾರಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಾರಣ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಗರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಭಾನುವಾರ ಜನತಾ ಕಫ್ರ್ಯೂ ಹೇರಿದ್ದಾರೆ. ಅಂದರೆ ಭಾನುವಾರ ಯಾರೂ ಮನೆಯಿಂದ ಹೊರಗೆ ಬರಬೇಡಿ. ಈ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟೋಣ ಎಂದು ಕರೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *