6 ವರ್ಷಗಳಿಂದ ಪ್ರೀತಿ, ದೈಹಿಕ ಸಂಪರ್ಕ – ಈಗ ಮದ್ವೆಗೆ ಒಲ್ಲೆ ಎಂದ ಲವ್ವರ್

– ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ
– ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿ ಬೆದರಿಕೆ
– ಬಲವಂತ ಮಾಡಿದ್ರೆ ಖಾಸಗಿ ಫೋಟೋ ಲೀಕ್

ಬೆಂಗಳೂರು: ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕ ಸಂಪರ್ಕ ಬೆಳೆಸಿ ಈಗ ಮೋಸ ಮಾಡಿದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಯುವಕನ ವಿರುದ್ಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ

ಚಂದ್ರಲೇಔಟ್ ನಿವಾಸಿ ರವಿಚಂದ್ರ ಮದುವೆಯಾಗುವುದಾಗಿ ನಂಬಿಸಿ 30 ವರ್ಷದ ಯುವತಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ಜೀವಬೆದರಿಕೆ ಹಾಕಿದ್ದಾನೆ.

ದೂರಿನಲ್ಲಿ ಏನಿದೆ?
ಶಾಲಾ ದಿನಗಳಿಂದ ನನ್ನ ಸ್ನೇಹಿತನಾಗಿದ್ದ ರವಿಚಂದ್ರ, ಕಳೆದ ಆರು ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದ. ಮೊದಲ ಬಾರಿ ನನ್ನ ತಾಯಿ ಊರಿಗೆ ಹೋಗಿದ್ದಾಗ ಬಲವಂತವಾಗಿ ನನ್ನ ದೈಹಿಕವಾಗಿ ಬಳಸಿಕೊಂಡಿದ್ದ. ನಾನು ನಿನ್ನ ಮದುವೆಯಾಗುತ್ತೇನೆ ಏನಾಗಲ್ಲ ಎಂದು ನನ್ನ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದಾದ ಬಳಿಕ ನನ್ನನ್ನು ಮಾಲ್, ದೇವಸ್ಥಾನ ಪಾರ್ಕ್ ಎಂದು ಕರೆದುಕೊಂಡು ಸುತ್ತಾಡಿಸಿದ್ದ.

ಇದರೆ ಜೊತೆಗೆ ನಾನು ಪ್ರಗ್ನೆಂಟ್ ಆಗಿರುವ ವಿಚಾರ ಹೇಳಿದಾಗ ಗರ್ಭಪಾತ ಮಾಡಿಸಿದ್ದ. ನಿಮ್ಮ ಮನೆಯವರ ಹತ್ರ ಮದುವೆ ವಿಚಾರ ಮಾತಾಡಬೇಕು ಕರೆದುಕೊಂಡು ಹೋಗು ಅಂದಾಗ, ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು. ಮನೆ ಕಟ್ಟಿಸಿ ನಂತರ ಮದುವೆಯಾಗೋದಾಗಿ ಹೇಳಿದ್ದ. ಆ ನಂತರ ಫೆಬ್ರವರಿ 20ರಂದು ನನ್ನ ಮನೆಗೆ ಬಂದು ನಾನು ನಿನ್ನ ಮದುವೆಯಾಗಲ್ಲ ಎಂದು ಹೇಳಿ ಜೀವ ಬೆದರಿಕೆ ಸಹ ಹಾಕಿದ್ದಾನೆ.

ಆರೋಪಿ ರವಿಚಂದ್ರ, ಆತನ ಭಾವ ದೇವರಾಜ್, ಅಕ್ಕ ಲತಾ ಮತ್ತು ಇತರರಿಂದ ನನಗೆ ಜೀವಬೆದರಿಕೆ ಹಾಕಲಾಗಿದೆ. ರವಿಚಂದ್ರನನ್ನು ಮದುವೆ ಮಾಡಿ ಕೊಡಿ ಎಂದು ದೂರು ಕೊಡುವುದು. ಮನೆ ಬಳಿ ಬರುವುದು ಮಾಡದಂತೆ ಅವರು ನನಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಆತ ನನ್ನ ಜೊತೆಗಿದ್ದ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾಳೆ.

ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *