ಅರಣ್ಯ ಸಿಬ್ಬಂದಿಯ ಜೀಪ್ ಮೇಲೆ ದಾಳಿಗೆ ಯತ್ನಿಸಿದ ಕಾಡಾನೆ

ಚಾಮರಾಜನಗರ: ಕಾಡಾನೆಯೊಂದು ಅರಣ್ಯ ಸಿಬ್ಬಂದಿಯ ಜೀಪ್ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಯಡಿಯಾಳ ಅರಣ್ಯ ವಲಯದಲ್ಲಿ ನಡೆದಿದೆ.

ಕಾಡಾನೆಗಳು ಕಾಡಂಚಿನ ಗ್ರಾಮಗಳ ಕಡೆ ಬಾರದಂತೆ ರೈಲ್ವೇ ಹಳಿ ಕಂಬಿಗಳನ್ನು ಅಳವಡಿಸಲಾಗಿದೆ. ರೈಲ್ವೇ ಹಳಿ ಕಂಬಿಯನ್ನು ದಾಟಿ ಬರಲು ಪುಂಡಾನೆಯೊಂದು ಯತ್ನಿಸಿದೆ. ಆದರೆ ಒಂಟಿ ಸಲಗ ರೈಲ್ವೇ ಹಳಿ ಕಂಬಿ ದಾಟಿ ಹೊರಬರಲು ವಿಫಲವಾಗಿತ್ತು. ಬಳಿಕ ಇದೇ ಸಂಧರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಯ ಜೀಪ್ ಅನ್ನು ಕಂಡ ಆನೆ ಘೀಳಿಡುತ್ತಾ ದಾಳಿ ಮಾಡಲು ಮುಂದಾಗಿತ್ತು. ಕೂಡಲೇ ಅರಣ್ಯ ಸಿಬ್ಬಂದಿ ಸಿಡಿಮದ್ದು ಸಿಡಿಸಿ ಆನೆಯನ್ನು ಹಿಮ್ಮೆಟ್ಟಿಸಿದ್ದಾರೆ.

ಆನೆಯನ್ನು ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಂಡಿನ ಸದ್ದಿಗೆ ಭಯಗೊಂಡ ಆನೆ ಓಡಿ ಹೋಗಿತ್ತು.

Comments

Leave a Reply

Your email address will not be published. Required fields are marked *