ಮಾಜಿ ಅನರ್ಹರು ಸಿದ್ದರಾಮಯ್ಯ ಕರೆದ ಕೂಡ್ಲೇ ಕಾಂಗ್ರೆಸ್ಸಿಗೆ ವಾಪಸ್

ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅನರ್ಹರಾಗಿದ್ದ ಶಾಸಕರುಗಳು ಈಗ ಚುನಾವಣೆ ಗೆದ್ದು ಸಚಿವರಾಗಿದ್ದಾರೆ. ಆದರೆ ಆ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಕರೆದ ಕೂಡಲೇ ಕಾಂಗ್ರೆಸ್ಸಿಗೆ ವಾಪಸ್ ಬರ್ತಾರೆ ಅಂತ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವ ಹೇಳಿದ್ದಾರೆ.

ಮಾಜಿ ಕೇಂದ್ರ ಸಚಿವೆ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ಈ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ವಿಜಯ ನಗರದ ಕಾಸಿಯ ಭವನದಲ್ಲಿ ಸಿಎಎ ಹಾಗೂ ಎನ್ ಆರ್‍ಸಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಮಾರ್ಗರೇಟ್ ಆಳ್ವ, ರಾಜ್ಯದಲ್ಲಿ ಶಾಸಕರ ಬೈ ಆ್ಯಂಡ್ ಸೇಲ್ ಆಗಿ ಬಿಜೆಪಿ ಸರ್ಕಾರ ರಚನೆ ಆಯ್ತು. ಸಿದ್ದರಾಮಯ್ಯಗೆ ಇದು ಚೆನ್ನಾಗಿ ಗೊತ್ತು. ದುಡ್ಡು ತಗೊಂಡು ಹೋದವರು ಎಷ್ಟು ದಿನ ಅಲ್ಲಿ ಇರ್ತಾರೆ. ಸಿದ್ದರಾಮಯ್ಯ ಯಾವಾಗ ಕರಿತರೋ ಅವಾಗ ವಾಪಸ್ ಬಂದೇ ಬರುತ್ತಾರೆ ಎಂದಿದ್ದಾರೆ.

ಆ ಮೂಲಕ ಆಪರೇಷನ್ ಕಮಲದ ಬಗ್ಗೆ ಸಿದ್ದರಾಮಯ್ಯಗೆ ಸಂಪೂರ್ಣ ಮಾಹಿತಿ ಇತ್ತು ಅನ್ನೋದರ ಜೊತೆಗೆ ಶಾಸಕರು ಸಿದ್ದರಾಮಯ್ಯ ಕರೆದರೆ ಯಾವಾಗ ಬೇಕಾದರೂ ವಾಪಸ್ ಬರುತ್ತಾರೆ ಎಂದಿದ್ದಾರೆ. ಆಳ್ವ ಹೇಳಿಕೆಗೆ ಸ್ವತಹ ಕಾಂಗ್ರೆಸ್ ಕಾರ್ಯಕರ್ತೆಯರೆ ಚಪ್ಪಾಳೆ ಹೊಡೆದು ನಕ್ಕ ಘಟನೆಯು ನಡೆಯಿತು.

Comments

Leave a Reply

Your email address will not be published. Required fields are marked *