ಎಷ್ಟೇ ಬೆಣ್ಣೆ ಹಚ್ಚಿದ್ರೂ ಬೈಕ್ ಖರೀದಿಸಲು ಬಿಡಲ್ಲ: ಕಾರ್ತಿಕ್ ಆರ್ಯನ್ ತಾಯಿ

-ನನ್ಗೆ ಬೈಕ್ ಬೇಕೆಂದು ಹಠ ಹಿಡಿದ ಆರ್ಯನ್
-ಮನವೊಲಿಕೆಗಾಗಿ ವಿಡಿಯೋ ಮಾಡಿದ್ರೂ ಅಮ್ಮ ಡೋಂಟ್ ಕೇರ್

ಮುಂಬೈ: ನೀವು ಎಷ್ಟೇ ಬೆಣ್ಣೆ ಹಚ್ಚಿದ್ರೂ ಬೈಕ್ ಖರೀದಿಸಲು ಅನುಮತಿ ನೀಡಲ್ಲ ಎಂದು ಕಾರ್ತಿಕ್ ಆರ್ಯನ್ ಗೆ ತಾಯಿ ಹೇಳಿದ್ದಾರೆ.

ಭೂಲ್ ಭುಲೈಯಾ-2 ಸಿನಿಮಾ ಶೂಟಿಂಗ್ ಗಾಗಿ ಕಾರ್ತಿಕ್ ಆರ್ಯನ್ ಶುಕ್ರವಾರ ಸಂಜೆ ಜೈಪುರಗೆ ಪ್ರಯಾಣ ಬೆಳೆಸಿದ್ದಾರೆ. ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಗಾಯಗೊಂಡಿದ್ದರು. ಜೈಪುರ ಪ್ರಯಾಣದ ಮಧ್ಯೆ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು, ಅಮ್ಮನಿಂದ ದೂರ ಹೋಗಲು ಇಷ್ಟವಾಗಲ್ಲ. ಸಣ್ಣ ಗಾಯಗೊಂಡಾಗಲು ಅಮ್ಮನ ನೆನಪು ಬರುತ್ತದೆ. ಇಂದು ಸಹ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.

https://www.instagram.com/p/B8yuoh2pXQs/

ಮಗನ ಪೋಸ್ಟ್ ಗೆ ಕಮೆಂಟ್ ಮಾಡಿರುವ ಕಾರ್ತಿಕ್ ತಾಯಿ ಮಾಲಾ ತಿವಾರಿ, ಎಷ್ಟು ಬೆಣ್ಣೆ ಹೆಚ್ಚುತ್ತೀರಿ ಹಚ್ಚಿ. ನಾನು ಮಾತ್ರ ಬುಲೆಟ್ ಬೈಕ್ ಖರೀದಿಸಲು ಅನುಮತಿ ನೀಡಲ್ಲ ಎಂದಿದ್ದಾರೆ. ಅಮ್ಮನ ಕಮೆಂಟ್ ಗೆ ರಿಪ್ಲೈ ಕೊಟ್ಟಿರುವ ಆರ್ಯನ್, ಮಮ್ಮಿ ಅಂತ ಬರೆದು ಅಳುವ ಎಮೋಜಿ ಹಾಕಿದ್ದಾರೆ. ಜೈಪುರದಲ್ಲಿ 10 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

ಇಷ್ಟಕ್ಕೆ ಸುಮ್ಮನಾಗದ ಆರ್ಯನ್ ಅಮ್ಮನ ಮನವೊಲಿಸಲು ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಸ್ನೇಹಿತರ ಮುಂದೆ ತನಗೆ ಬೈಕ್ ಬೇಕೆಂದು ಹೇಳುತ್ತಿದ್ದಾರೆ. ಕೆಲವರು ಬೈಕ್ ಸೇಫಲ್ಲ, ಕಾರ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಏನೇ ಆಗಲಿ ನನಗೆ ಬೈಕ್ ಬೇಕೇ ಬೇಕು ಎಂದು ಆರ್ಯನ್ ಹೇಳುತ್ತಿರೋದನ್ನು ವಿಡಿಯೋದಲ್ಲಿ ನೋಡಬಹುದು.

https://www.instagram.com/p/B803vlYp7_v/

Comments

Leave a Reply

Your email address will not be published. Required fields are marked *