ಪಾಕ್ ಪರ ಘೋಷಣೆ ಕೂಗಿದವ್ರನ್ನ ಎನ್‍ಕೌಂಟರ್ ಮಾಡ್ಬೇಕು: ಮುತಾಲಿಕ್

ಧಾರವಾಡ: ದೇಶದ್ರೋಹಿ ಕ್ರಿಮಿಗಳು ಸಮಾಜ, ದೇಶ ಕುಲಗೆಡಿಸುವ ಪ್ರಕ್ರಿಯೆ ಮಾಡುತ್ತಿವೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಎನ್ ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಫ್ರೀಡಂ ಪಾರ್ಕ್‍ನಲ್ಲಿ ದೇಶದ್ರೋಹಿ ಘೋಷಣೆ ಹಾಕ್ತಾರೆ ಅಂದ್ರೆ ನಮ್ಮ ದೇಶದ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ, ಸಮಾಜ, ಜನ ಎಲ್ಲರೂ ಗಂಭೀರವಾಗಿ ಯೋಚನೆ ಮಾಡಬೇಕಿದೆ. ಇದನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬಾರದು. ಯಾವುದೋ ಕಾಶ್ಮೀರ ಕಡೆಯ ಹುಡುಗರು, ಅವರಿಗೆ ಗೊತ್ತಾಗಿಲ್ಲ ಅಂತ ಹೇಳಬೇಡಿ. ಇದನ್ನು ಇಲ್ಲಿಯೇ ಹೊಸಕಿ ಹಾಕಬೇಕು. ಇವರನ್ನು ಎನ್‍ಕೌಂಟರ್ ಮಾಡಬೇಕು ಆಗ ಮಾತ್ರ ಇದು ನಿಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇಂದು ಕೂಡ ಟೌನ್ ಹಾಲ್ ಎದುರುಗಡೆ ಮತ್ತೋರ್ವ ಹುಡುಗಿ ಹಾಗೆಯೇ ಹೇಳಿದ್ದಾಳೆ. ಇದು ಕೂಡ ಖಂಡನೀಯ. ಇದನ್ನು ತಡೆಯದಿದ್ದರೇ ಇನ್ನೂ ಹರಡುತ್ತೇ. ಇಂಥವರನ್ನು ಕಲ್ಲೆಸೆದು ಕೊಂದು ಹಾಕಬೇಕು. ಅವರಿಗೆ ಸರ್ಕಾರ ಜಾಮೀನು ಸಿಗದೇ ಇರುವ ಹಾಗೇ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಹೊರಗಡೆ ಬಂದು ಅದೇ ಕೆಲಸ ಮಾಡ್ತಾರೆ. ಇದು ದೇಶದ್ರೋಹದ ವಿಷ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ ದೇಶದ್ರೋಹ ದೇಶದ್ರೋಹವೇ, ಕಮ್ಯೂನಿಸ್ಟರು, ಮಾಕ್ರ್ಸ್‍ವಾದಿಗಳು ಇದರಲ್ಲಿ ವ್ಯವಸ್ಥಿತ ಸಂಚು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಿಎಫ್‍ಐ, ಎಸ್‍ಡಿಪಿಐ, ವ್ಯವಸ್ಥಿತ ಸಂಚು ನಡೆಯುತ್ತಿದೆ. ಅವರೇ ಈ ರೀತಿ ಬೆಂಕಿ ಹಂಚುತ್ತಿದ್ದಾರೆ. ಬ್ರೈನ್ ವಾಶ್ ಮಾಡಿ ಬಲಿ ತಗೋತಾ ಇದ್ದಾರೆ. ಇದೆಲ್ಲದರ ಕೇಂದ್ರ ಜೆಎನ್‍ಯು. ಅಂದು ಅಫ್ಜಲ್‍ಗುರು ಜಿಂದಾಬಾಂದ್ ಅಂದಾಗ ಎನ್‍ಕೌಂಟರ್ ಮಾಡಬೇಕಿತ್ತು. ಅಂದೇ ಎನ್‍ಕೌಂಟರ್ ಮಾಡಿದ್ದರೆ ಇದು ಹಬ್ಬುತ್ತಿರಲಿಲ್ಲ. ಇವರಾರೂ ಈಗ ಬೊಗಳುತ್ತಿರಲಿಲ್ಲ ಎಂದು ಮುತಾಲಿಕ್ ಹೇಳಿದರು.

Comments

Leave a Reply

Your email address will not be published. Required fields are marked *