ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ, ಸೋಲು ನಮ್ಮನ್ನು ನಿರಾಶೆಗೊಳಿಸಲ್ಲ – ಬಿಜೆಪಿ ಪೋಸ್ಟರ್

ನವದೆಹಲಿ: ಆಮ್ ಆದ್ಮಿ ಪಕ್ಷ ಮೂರನೇ ಬಾರಿ ದೆಹಲಿಯಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಕೆಲವೊಮ್ಮೆ ಹಿನ್ನಡೆ ಅನುಭವಿಸಿದರೂ ಈಗ ಆಪ್ ಭಾರೀ ಮುನ್ನಡೆ ಪಡೆದುಕೊಂಡಿದೆ.

ಬೆಳಗ್ಗೆ 11:30ರ ಟ್ರೆಂಡ್ ಪ್ರಕಾರ ಆಪ್ 54 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಬಿಜೆಪಿ 16 ರಲ್ಲಿ ಮುನ್ನಡೆ ಸಾಧಿಸಿದೆ. ಇಂದು ಮತ ಎಣಿಕೆಯ ಆರಂಭಕ್ಕೆ ಮುನ್ನ ದೆಹಲಿ ಬಿಜೆಪಿ ಕಚೇರಿ ಮುಂದೆ ಹಾಕಲಾದ ದೊಡ್ಡ ಪೋಸ್ಟರ್ ಈಗ ಎಲ್ಲರ ಗಮನ ಸೆಳೆದಿದೆ.

“ವಿಜಯದಿಂದ ನಮಗೆ ಅಹಂಕಾರ ಬರುವುದಿಲ್ಲ. ಸೋಲು ನಮ್ಮನ್ನು ನಿರಾಶೆಗೊಳಿಸುವುದಿಲ್ಲ” ಎಂದು ಪೋಸ್ಟರ್ ಹಾಕಲಾಗಿದೆ. ಹಿಂದಿಯಲ್ಲಿ ಪೋಸ್ಟರ್ ಇದ್ದು ಇದರಲ್ಲಿ ಅಮಿತ್ ಶಾ ಭಾವಚಿತ್ರವಿದೆ.

ಒಟ್ಟು 27 ಕ್ಷೇತ್ರಗಳಲ್ಲಿ ಆಪ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಅಂತರ ಮುನ್ನಡೆ ಅಂತರ 1 ಸಾವಿರ ಇದೆ. ಇನ್ನು ಹಲವು ಸುತ್ತುಗಳ ಮತ ಎಣಿಕೆ ಬಾಕಿ ಇದೆ. ಕಾಂಗ್ರೆಸ್ ಮತಗಳಿಕೆ ಪ್ರಮಾಣ ಭಾರೀ ಕುಸಿದಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಪ್ರತಿಕ್ರಿಯಿಸಿ, ಮತ ಎಣಿಕೆ ಪೂರ್ಣಗೊಂಡಿಲ್ಲ, ಫಲಿತಾಂಶಕ್ಕೆ ಕಾಯಿರಿ. ಯಾವುದೇ ಫಲಿತಾಂಶ ಬಂದರೂ ಅದಕ್ಕೆ ನಾನೇ ಸಂಪೂರ್ಣ ಹೊಣೆ ಎಂದು ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *