ಇನ್ಮುಂದೆ ಡಿಸಿಎಂ ವಿಚಾರ ಮಾತನಾಡಲ್ಲ: ಶ್ರೀರಾಮುಲು

ಮಂಡ್ಯ: ನನಗೆ ಡಿಸಿಎಂ ಸ್ಥಾನ ಬೇಕು ಎನ್ನುವ ವಿಚಾರದಿಂದ ಪಕ್ಷಕ್ಕೆ ಮುಜುಗರ ತರಲು ಮುಂದಾಗುವುದಿಲ್ಲ. ನಾನು ಇನ್ನೂ ಮುಂದೆ ಡಿಸಿಎಂ ಹುದ್ದೆ ಬಗ್ಗೆ ಪ್ರಸ್ತಾಪ ಮಾಡಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಇಷ್ಟು ದಿನ ಡಿಸಿಎಂ ವಿಚಾರದಲ್ಲಿ ಸಚಿವ ಶ್ರೀರಾಮುಲು ಬಿಜೆಪಿ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು. ಇಂದು ಮಂಡ್ಯದಲ್ಲಿ ಮಾತನಾಡಿದ ಶ್ರೀರಾಮುಲು, ಡಿಸಿಎಂ ಹುದ್ದೆ ಕುರಿತು ನಾನು ಎಲ್ಲೂ ಕೂಡ ಪ್ರಸ್ತಾಪ ಮಾಡಲ್ಲ. ಡಿಸಿಎಂ ಹುದ್ದೆಯಿಂದ ಪಕ್ಷಕ್ಕೆ ಮುಜುಗರ ಉಂಟಾದರೆ, ಆ ವಿಚಾರ ನಾನು ಮಾತಾಡಲ್ಲ. ಈ ಬಗ್ಗೆ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇನ್ನೂ ಸಚಿವ ಸ್ಥಾನದ ವಿಚಾರದಲ್ಲಿ ಮೂಲ ಬಿಜೆಪಿ ಶಾಸಕ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರಿಗೂ ಸಚಿವ ಸ್ಥಾನ ಬೇಕು ಎನ್ನುವ ಆಸೆ ಇರುತ್ತದೆ. ಅವಕಾಶ ಸಿಕ್ಕಾಗ ಅವರ ಆಸೆಯನ್ನು ಯಡಿಯೂರಪ್ಪ ಅವರು ಈಡೇರಿಸುತ್ತಾರೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *