ಅಮಿತ್ ಶಾ ಜೈಲಿಗೆ ನೆಂಟಸ್ಥಿಕೆ ಮಾಡಲು ಹೋಗಿದ್ರಾ – ಸಿದ್ದು ವ್ಯಂಗ್ಯ

ಚಿಕ್ಕಮಗಳೂರು: ಅಮಿತ್ ಶಾ ಜೈಲಿಗೆ ನೆಂಟಸ್ಥಿಕೆ ಮಾಡಲು ಹೋಗಿದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿಶ್ ಶಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

ನಗರದ ಸಿರಿ ರೆಸಾರ್ಟ್‍ನಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಜೈಲಿನಿಂದ ಬಂದಾಗ ಆ ರೀತಿ ಸ್ವಾಗತ ಕೋರಿದ್ದು ಸರಿಯಾ, ಇದರಿಂದ ಸಮಾಜಕ್ಕೆ ಏನ್ ಸಂದೇಶ ಸಿಗುತ್ತೆ ಎಂಬ ಪ್ರಶ್ನೆಗೆ, ಅದನ್ನು ಬಿಡಿ ಅದರ ಚರ್ಚೆಯಲ್ಲಿ ನಾನು ಪಾಲ್ಗೊಳ್ಳಲ್ಲ ಎನ್ನುತ್ತಲೇ ಅಮಿತ್ ಶಾ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಮಿತ್ ಶಾ ಎಲ್ಲಿಂದ ಬಂದರು. ಜೈಲಿಗೆ ನೆಂಟಸ್ಥನ ಮಾಡಲು ಹೋಗಿದ್ರಾ ಎಂದು ವ್ಯಂಗ್ಯದ ನಗು ಬೀರಿದರು. ಅವರು ಹೋಂ ಮಿನಿಸ್ಟರ್, ಹಿಂದೆ ಹೋಂ ಮಿನಿಸ್ಟರ್ ಆದಾಗ ಎಲ್ಲಿಗೆ ಹೋಗಿದ್ದರು. ಮಾವನ ಮನೆಗೆ ಹೋಗಿದ್ರಾ ಎಂದು ಎಲ್ಲಾ ಹೇಳಿ ಮುಗಿಸಿ ಇವೆಲ್ಲಾ ಚರ್ಚೆ ಬೇಡ ಎಂದರು. ಡಿ.ಕೆ.ಶಿವಕಕುಮಾರ್ ಕೇಸಲ್ಲಿ ಅವರೇ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ಜನ ಸ್ವಯಂಪ್ರೇರಿತರಾಗಿ ಅವರನ್ನ ರಿಸೀವ್ ಮಾಡಿಕೊಂಡರೆ, ಯಾಕ್ರೀ ಬಂದ್ರಿ ಅನ್ನಬೇಕಾ? ದೇಶದಲ್ಲಿ ಇವೆಲ್ಲಾ ನಡೆಯುತ್ತೆ ಎಂದು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಆಡುತ್ತಲೇ ಅಮಿತ್ ಶಾ ವಿರುದ್ಧ ಕಿಡಿಕಾರಿದರು.

Comments

Leave a Reply

Your email address will not be published. Required fields are marked *