ಸೌದೆಯಿಂದ ಬಡಿದು ಹೆಂಡ್ತಿಯನ್ನೇ ಹತ್ಯೆಗೈದ

ಚಾಮರಾಜನಗರ: ಶೀಲ ಶಂಕಿಸಿ ಸೌದೆಯಿಂದ ಬಡಿದು ಹೆಂಡತಿಯನ್ನೇ ಪತಿಯೋರ್ವ ಕೊಲೆ ಮಾಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಶಿಕಲಾ (37) ಮೃತಪಟ್ಟ ದುರ್ದೈವಿ. ಆರೋಪಿ ಸುರೇಶ್ ಬಂಧಿತ ವ್ಯಕ್ತಿ. ಪತ್ನಿ ಬೇರೊಬ್ಬನೊಂದಿಗೆ ನಿತ್ಯ ಮಾತನಾಡುತ್ತಾಳೆ. ಹೀಗಾಗಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದೀಯಾ ಎಂದು ಪತಿ ಕಟ್ಟಿಗೆಯಿಂದ ಹೊಡೆದು ಕೊಂದು ಹಾಕಿದ್ದಾನೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಶಿಕಲಾಳನ್ನು ನೆರೆಹೊರೆಯವರು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *