ಪಾಕ್ ಗಡಿಯಲ್ಲಿ ಜಮೀರ್ ಗಂಡಸ್ತನ ತೋರಿಸಲಿ: ಯತ್ನಾಳ್

ವಿಜಯಪುರ: ಶಾಸಕ ಸೋಮಶೇಖರ ರೆಡ್ಡಿ ನಿವಾಸ ಎದುರು ಧರಣಿ ನಡೆಸಲು ಮುಂದಾಗಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಅವರಿಗೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಟಾಂಗ್ ನೀಡಿದ್ದು, ಜಮೀರ್ ಪಾಕಿಸ್ತಾನದ ಗಡಿಯಲ್ಲಿ ತಮ್ಮ ಗಂಡಸ್ತನ ತೋರಿಸಲಿ ಎಂದು ಕಿಡಿಕಾರಿದ್ದಾರೆ.

ಇಂದು ಐತಿಹಾಸಿಕ ಸಿದ್ದೇಶ್ವರ ಜಾತ್ರೆಗೆ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಜಮೀರ್ ಅವರಿಗೆ ತಾಕತ್ತು ಇದ್ರೆ ಪಾಕಿಸ್ತಾನದ ಗಡಿಯಲ್ಲಿ ತಮ್ಮ ಗಂಡಸ್ತನ ತೋರಿಸಲಿ. ಬಳ್ಳಾರಿಗೆ ಬರುವ ಮೂಲಕ ಷಂಡನಂತೆ ಜಮೀರ್ ಮಾಡ್ತಿದ್ದಾರೆ ಎಂದರು. ಇದನ್ನು ಓದಿ: ಧರಣಿ ಮಾಡಿದಾಕ್ಷಣ ದೊಡ್ಡ ನಾಯಕನಾಗುತ್ತೀಯಾ?- ಜಮೀರ್‌ಗೆ ಸಚಿವ ಶ್ರೀರಾಮುಲು ತಿರುಗೇಟು

ಜಮೀರ್ ಬಳ್ಳಾರಿಗೆ ಆಗಮಿಸುವ ಮುನ್ನ ಮೊದಲು ಸಿಎಂ ಯಡಿಯೂರಪ್ಪ ಅವರ ನಿವಾಸ ಎದುರು ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸಲಿ. ಮೊದಲು ಜಮೀರ್ ದೇಶದ ವಿರುದ್ಧ ಪ್ರಚೋಚದನಕಾರಿ ಹೇಳಿಕೆ ನೀಡಿ ಮಾತನಾಡಿದ್ದಾರೆ. ಆದ್ದರಿಂದ ಮೊದಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜಮೀರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *