ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿ – ದರ್ಶನ್ ಹುಟ್ಟುಹಬ್ಬಕ್ಕೆ ಇಟ್ಟಿದ್ದ ಹಣದಲ್ಲಿ ಅಭಿಮಾನಿಗಳಿಂದ ನೆರವು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಬ್ರೈನ್ ಟ್ಯೂಮರ್‌ನಿಂದ ಕುಸಿದು ಬಿದ್ದ ಯುವತಿಯ ಚಿಕಿತ್ಸೆಗೆ ಮುಂದಾಗಿದ್ದಾರೆ.

ದೇವನಹಳ್ಳಿಯ ವಿಜಯಪುರ ನಿವಾಸಿ ಎಸ್. ಚೈತನ್ಯಳ ಜೀವ ಉಳಿಸಲು ದರ್ಶನ್ ಅಭಿಮಾನಿಗಳು ನೆರವಾಗಿದ್ದಾರೆ. ಬಡಕುಟುಂಬದಲ್ಲಿ ಹುಟ್ಟಿರುವ ಚೈತನ್ಯ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದಾಳೆ. ಚೈತನ್ಯ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದು, ಜನವರಿ 3ರಂದು ಕುಸಿದು ಬಿದ್ದಿದ್ದಳು. ಇದನ್ನೂ ಓದಿ: ಅನಾಥಾಶ್ರಮಗಳಿಗೆ ಅಡುಗೆ ಸಾಮಗ್ರಿ ನೀಡಿ ದರ್ಶನ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ಚೈತನ್ಯ ತಂದೆ ಸತ್ಯ ನಾರಾಯಣ ವಾಟರ್ ಟ್ಯಾಂಕರ್ ಬಿಝಿನೆಸ್ ಮಾಡುತ್ತಿದ್ದು, ತಮ್ಮ ಮಗಳಿಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸತ್ಯ ನಾರಾಯಣ ಮೊದಲಿಗೆ 6 ಲಕ್ಷ ರೂ. ಕಟ್ಟಿ ಮಗಳಿಗೆ ಆಪರೇಷನ್ ಮಾಡಿಸಿದ್ದಾರೆ. ಆದರೆ ಚೈತನ್ಯ ಕೋಮದಲ್ಲಿದ್ದಾಳೆ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಹೋರಾಡ್ತಿರುವ ಅಭಿಮಾನಿಯ ಆಸೆ ಈಡೇರಿಸಿದ ಡಿ-ಬಾಸ್

ಹೆಚ್ಚಿನ ಚಿಕಿತ್ಸೆಗೆ 25 ಲಕ್ಷ ಹಣ ಬೇಕಾಗುತ್ತೆ ಎಂದು ವೈದ್ಯರು ಸತ್ಯನಾರಾಯಣ ಅವರಿಗೆ ತಿಳಿಸಿದರು. ಚಿಕಿತ್ಸೆಗೆ ಹಣವಿಲ್ಲದೆ ಕೈ ಚೆಲ್ಲಿ ಕುಳಿತಾಗ ದರ್ಶನ್ ಅಭಿಮಾನಿಗಳು ನೆರವಾಗಲು ಮುಂದಾಗಿದ್ದಾರೆ.

ತಮ್ಮ ನೆಚ್ಚಿನ ನಟ ದರ್ಶನ್ ಅವರ ಹುಟ್ಟುಹಬ್ಬಕ್ಕಾಗಿ ಇಟ್ಟಿರುವ ಹಣದಲ್ಲಿ ಅರ್ಧ ಭಾಗ ಚೈತನ್ಯ ಚಿಕಿತ್ಸೆಗೆ ನೀಡಲು ದೇವನಹಳ್ಳಿ ಅಭಿಮಾನಿಗಳು ಮುಂದಾಗಿದ್ದಾರೆ. ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚೈತನ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

Comments

Leave a Reply

Your email address will not be published. Required fields are marked *