ಪೌರತ್ವದ ಕಿಚ್ಚಿಗೆ ಬೆದರಿದ ಕಾಲೇಜು – ಎರಡು ದಿನ ರಜೆ ಘೋಷಣೆ

ಬೆಂಗಳೂರು: ಸಹಿ ಸಂಗ್ರಹಕ್ಕೆ ಹೋಗಿ ಫಜೀತಿಗೆ ಸಿಲುಕಿದ್ದ ಬಿಜೆಪಿ ಎಲ್ಲಾ ಕಡೆ ಮುಜುಗರಕ್ಕೆ ಒಳಗಾಗಿತ್ತು. ಆದರೆ ಅದೇ ವಿಚಾರಕ್ಕೆ ಈಗ ದೊಡ್ಡ ವಿವಾದಗಳು ತಲೆ ಎತ್ತಿವೆ. ಇದರ ಸಹವಾಸವೇ ಬೇಡ ಎಂದು ಕಾಲೇಜು ಎರಡು ದಿನ ರಜೆ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ.

ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಗಲಾಟೆ ಪ್ರಕರಣಕ್ಕೆ ಬೆದರಿದ ಕಾಲೇಜಿನ ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಿದೆ. ಇಂದು ಕಾಲೇಜಿನ ಮುಂದೆ ಮೌನ ಪ್ರತಿಭಟನೆ ಮಾಡಬೇಕು ಎಂದು ಪೊಲೀಸ್ ಅನುಮತಿ ಕೋರಿದ್ದರು.

ಪೊಲೀಸರು ಕೂಡ ಫಜೀತಿಗೆ ಸಿಕ್ಕಿ ಅನುಮತಿಗಾಗಿ ಕಾಲೇಜು ಆಡಳಿತ ಮಂಡಳಿ ಅನುಮತಿಗೆ ಸೂಚಿಸಿತ್ತು. ವಿದ್ಯಾರ್ಥಿಗಳು ಕೂಡ ಕಾಲೇಜಿನ ಅನುಮತಿ ಕೇಳಲು ಪ್ರಾರಂಭಿಸಿದ್ದರಿಂದ ಹೆದರಿದ ಕಾಲೇಜಿನ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿ ಪ್ರತಿಭಟನೆಯ ಬಿಸಿಯಿಂದ ತಪ್ಪಿಸಿಕೊಂಡಿದೆ.

Comments

Leave a Reply

Your email address will not be published. Required fields are marked *