ಸಂಬಂಧ ಮುಂದುವರಿಸುಂತೆ ಬೇಡಿಕೆ – ಪತಿಯ ಮುಂದೆಯೇ ಮಾಜಿ ಗೆಳೆಯನ ಕೊಲೆ

-ಕೊಲೆ ಮಾಡಿ ಪೊಲೀಸರಿಗೆ ಶರಣಾದ ಮಹಿಳೆ

ಚೆನ್ನೈ: ಸಂಬಂಧವನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಕ್ಕೆ ಮಹಿಳೆಯೊಬ್ಬಳು ಪತಿಯ ಮುಂದೆಯೇ ತನ್ನ ಮಾಜಿ ಗೆಳೆಯನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಎಂ.ರವಿ (38) ಕೊಲೆಯಾದ ವ್ಯಕ್ತಿ. ಈತ ಸಿನಿಮಾ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ದೇವಿ ತನ್ನ ಸಹೋದರಿಯ ಮನೆಯಲ್ಲಿ ಸುತ್ತಿಗೆಯಿಂದ ರವಿ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ನಂತರ ಆಕೆ ಪೊಲೀಸರಿಗೆ ಶರಣಾಗಿದ್ದಾಳೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ದೇವಿ ಕಿರುತೆರೆ ನಟಿ ಎಂದು ಹೇಳಾಗುತ್ತಿದೆ. ಇತ್ತ ಮೃತ ರವಿ ಮಧುರೈ ನಿವಾಸಿಯಾಗಿದ್ದು, ದೇವಿಯನ್ನ ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಸಂಬಂಧ ಬೆಳೆಸಿದ್ದನು. ಆದರೆ ಎರಡು ವರ್ಷಗಳ ಹಿಂದೆ ದೇವಿಯ ಪತಿಗೆ ರವಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ತಿಳಿದಿತ್ತು. ಹೀಗಾಗಿ ಮತ್ತೆ ಇಂತಹ ತಪ್ಪು ಮಾಡಬಾರದು ಎಂದು ಎಚ್ಚರಿಸಿದ್ದನು. ಅದರಂತೆಯೇ ದೇವಿ ರವಿಯಿಂದ ದೂರವಿದ್ದಳು.

ಇತ್ತೀಚೆಗೆ ಮೃತ ರವಿ ಕೊಲಥೂರ್ ಪ್ರದೇಶದಲ್ಲಿ ದೇವಿ ಇರುವ ಬಗ್ಗೆ ತಿಳಿದುಕೊಂಡಿದ್ದಾನೆ. ಆರೋಪಿ ದೇವಿ ಸಣ್ಣ ವ್ಯಾಪಾರ ಮಾಡಿಕೊಂಡು ಕೊಲಥೂರ್ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಅದೇ ಪ್ರದೇಶದಲ್ಲಿ ದೇವಿಯ ಸಹೋದರಿ ಕೂಡ ವಾಸಿಸುತ್ತಿದ್ದಳು. ಎರಡು ದಿನಗಳ ಹಿಂದೆ ರವಿ, ದೇವಿಯ ಸಹೋದರಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಸಹೋದರಿಯ ಜೊತೆ ದೇವಿ ಮತ್ತು ನನ್ನ ಸಂಬಂಧ ಮುಂದುವರಿಸಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಆತನ ಒತ್ತಾಯದ ನಂತರ, ಸಹೋದರಿ ಲಕ್ಷ್ಮಿ ಮಧ್ಯರಾತ್ರಿಯಲ್ಲಿಯೇ ದೇವಿಯನ್ನು ಮನೆಗೆ ಕರೆದಿದ್ದಾಳೆ. ಆಕೆ ಪತಿಯ ಜೊತೆಯೇ ಲಕ್ಷ್ಮಿ ಮನೆಗೆ ಬಂದಿದ್ದಾಳೆ.

ದೇವಿ ಮತ್ತು ಅವಳ ಪತಿ ಮನೆಗೆ ಹೋಗುತ್ತಿದ್ದಂತೆ ಮತ್ತೆ ರವಿ ತಮ್ಮ ಸಂಬಂಧವನ್ನು ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಾನೆ. ಇದೇ ವಿಚಾರದ ಬಗ್ಗೆ ಜಗಳ ನಡೆದಿದೆ. ಆಗ ಕೋಪದಲ್ಲಿ ದೇವಿ ಸುತ್ತಿಗೆಯಿಂದ ರವಿ ತಲೆಗೆ ಹೊಡೆದಿದ್ದಾಳೆ. ಪರಿಣಾಮ ತೀವ್ರವಾಗಿ ರಕ್ತಸ್ರಾವವಾದ ನಂತರ ಕುಸಿದು ಸ್ಥಳದಲ್ಲೇ ರವಿ ಮೃತಪಟ್ಟಿದ್ದಾನೆ. ನಂತರ ಆರೋಪಿ ದೇವಿ ರಾಜಮಂಗಲಂ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದುದಾಗಿ ತಪ್ಪೊಪ್ಪಿಕೊಡಿದ್ದಾಳೆ.

ಸದ್ಯಕ್ಕೆ ಈ ಕೊಲೆಗೆ ಸಂಬಂಧಿಸಿದಂತೆ ದೇವಿ, ಆಕೆಯ ಪತಿ, ಸಹೋದರಿ ಲಕ್ಷ್ಮಿ ಮತ್ತು ಲಕ್ಷ್ಮಿ ಪತಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಂತರ ನಾಲ್ವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *