ವನ್ಯಜೀವಿ ಪ್ರಿಯರ ನಾಡಲ್ಲೂ ವರ್ಷಾಚರಣೆಗೆ ಬ್ರೇಕ್

ಚಾಮರಾಜನಗರ: ವನ್ಯಜೀವಿ ಪ್ರಿಯರ ಸ್ವರ್ಗ ಚಾಮರಾಜನಗರದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರ ಸಂರಕ್ಷಿತಾರಣ್ಯವನ್ನು ಒಳಗೊಂಡಿದೆ. ಈ ಮೂರು ಕೂಡ ಹುಲಿ ಸಂರಕ್ಷಿತಾರಣ್ಯವಾಗಿದ್ದು, ವನ್ಯಜೀವಿಗಳನ್ನು ನೋಡಿ ಎಂಜಾಯ್ ಮಾಡಲೂ ಸಾಕಷ್ಟು ಜನ ಕಾಡಿಗೆ ಬರುತ್ತಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿ ಪ್ರವಾಸಿಗರು ಮೈ ಮರೆಯದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಗುಂಪು ಗುಂಪಾಗಿ ಸೇರುವುದು, ಪಾರ್ಟಿಯಲ್ಲಿ ಡಿಜೆ ಬಳಸಲು ನಿಷೇಧ ಹೇರಲಾಗಿದೆ.

ಪಟಾಕಿ ಸಿಡಿಸಿ ಫೈರ್ ಕ್ಯಾಂಪ್ ಮಾಡಿ ವನ್ಯ ಜೀವಿಗಳಿಗೆ ತೊಂದರೆ ಕೊಟ್ಟರೆ ಹುಷಾರ್ ಅವರ ವಿರುದ್ಧ ಕ್ರಮ ಗ್ಯಾರಂಟಿ. ಹೊಸ ವರ್ಷಾಚರಣೆ ಮಾಡುವ ಹೋಟೆಲ್, ರೆಸಾರ್ಟ್ ಗಳು ಕಡ್ಡಾಯವಾಗಿ ಪೊಲೀಸರ ಅನುಮತಿ ಪಡೆಯಬೇಕು. ಇದರ ಜೊತೆಗೆ ಕಾರ್ಯಕ್ರಮದ ವೇಳೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ತಾಕೀತು ಮಾಡಲಾಗಿದೆ.

Comments

Leave a Reply

Your email address will not be published. Required fields are marked *