ಅಗ್ನಿ ಅವಘಡ- 5 ಲಕ್ಷ ರೂ. ಮೌಲ್ಯದ ಸೋಯಾ ಭಸ್ಮ

ಬೀದರ್: ಜಿಲ್ಲಾ ಉಸ್ತುವಾರಿ ಸಚಿವರ ಸ್ವ-ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ತಡರಾತ್ರಿ 80 ಕ್ವಿಂಟಾಲ್ ಸೋಯಾ ಸಂಪೂರ್ಣ ಬೆಂಕಿ ಆಹುತಿಯಾಗಿದೆ.

ದೇವರಾವ್ ಜಾದವ್ ಅವರಿಗೆ ಸೇರಿದ ಸುಮಾರು 5 ಲಕ್ಷ ರೂ.ನ ಸೋಯಾ ಅಗ್ನಿಗೆ ಆಹುತಿಯಾಗಿದೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬೋಂತಿ ತಾಂಡದಲ್ಲಿ ಈ ಅವಘಡ ಸಂಭವಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತ ಕಣ್ಣೀರು ಹಾಕುತ್ತಿದ್ದಾರೆ.

ಬೆಂಕಿ ಹತ್ತಿರುವುದನ್ನು ಕಂಡ ಸ್ಥಳೀಯರು ಪಕ್ಕದ ಬೋರವೆಲ್‍ನಿಂದ ಪೈಪ್ ಹಾಕಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ. ಏನೇ ಸಾಹಸ ಮಾಡಿದರೂ ಲಕ್ಷಾಂತರ ರೂ. ಮೌಲ್ಯದ ಸೋಯಾ ಮಾತ್ರ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳೀಯರು ಕರೆ ಮಾಡಿದರೂ ಅಗ್ನಿ ಶಾಮಕ ಸಿಬ್ಬಂದಿ ತಡವಾಗಿ ಆಗಮಿಸಿದ್ದು, ಸ್ಥಳೀಯರು ಕಿಡಿಕಾರಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ವಗ್ರಾಮದಲ್ಲೇ ಅವಘಡ ಸಂಭವಿಸಿದ್ದು, ಸಚಿವರು ಮಾತ್ರ ಸ್ಥಳಕ್ಕೆ ಬಂದು ಸಾಂತ್ವನ ಹೇಳಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *