ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

ಚಿಕ್ಕಮಗಳೂರು: ಕುವೆಂಪು ಹುಟ್ಟುಹಬ್ಬ ಮಾಸದ ಅಂಗವಾಗಿ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಮಕ್ಕಳೆಲ್ಲಾ ಸ್ವಯಂಪ್ರೇರಿತರಾಗಿ ಸಾಲಾಗಿ ನಿಂತು ಕುವೆಂಪು ಸಮಾಧಿ ಎದುರು ನಾಡಗೀತೆ ಹಾಡಿ ರಾಷ್ಟ್ರಕವಿಗೆ ಗೌರವ ಸಲ್ಲಿಸಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿ ಓದುತ್ತಿರೋ 15 ಮಕ್ಕಳನ್ನ ಪ್ರವಾಸಕ್ಕೆಂದು ಕುಪ್ಪಳ್ಳಿಯ ಕವಿಶೈಲಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಸಮವಸ್ತ್ರ ಧರಿಸಿದ್ದ ಮಕ್ಕಳೆಲ್ಲರೂ ಸಾಲಾಗಿ ನಿಂತು ನಾಡಗೀತೆಯನ್ನ ಸಂಪೂರ್ಣವಾಗಿ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ್ದಾರೆ.

ಮಕ್ಕಳ ನಡೆ ಕಂಡು ಶಿಕ್ಷಕರಿಗೆ ಆಶ್ಚರ್ಯವಾಗೋದ್ರ ಜೊತೆ ನಾವು ಬರೀ ಶಿಕ್ಷಣವನ್ನಷ್ಟೇ ಕಲಿಸಿದ್ದೇವೆ. ಆದರೆ ಮಕ್ಕಳು ನಾವು ಕಲಿಸಿದ ಶಿಕ್ಷಣದ ಜೊತೆ ಅದಕ್ಕಿಂತ ದೊಡ್ಡದ್ದಾದ ಸಂಸ್ಕಾರವನ್ನೂ ಕಲಿತ್ತಿದ್ದಾರೆಂದು ಮಕ್ಕಳನ್ನ ಕಂಡು ಶಿಕ್ಷಕರು ಖುಷಿ ಪಟ್ಟಿದ್ದಾರೆ. ಶಾಲೆಯ ಶಿಕ್ಷಕರಾದ ಸರ್ದಾರ್ ಖಾನ್, ಸತೀಶ್, ಅತಿಥಿ ಶಿಕ್ಷಕರಾದ ಶಿವಲೀಲಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಗೀತಾ ಮಕ್ಕಳ ಜೊತೆಯಲ್ಲಿದ್ದರು.

Comments

Leave a Reply

Your email address will not be published. Required fields are marked *