ಸಿಸಿಟಿವಿ ಕ್ಯಾಮೆರಾ ಒಡೆದು ದೇವರ ಹುಂಡಿಗೆ ಕನ್ನಾ

ಮಂಡ್ಯ: ದೇವಸ್ಥಾನದ ಬೀಗ ಒಡೆದು ಹುಂಡಿಯಲ್ಲಿರುವ ಹಣವನ್ನು ಕಳ್ಳತನ ಮಾಡಲಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ದಂಡಿಮಾರಮ್ಮನ ದೇವಸ್ಥಾನದ ಹುಂಡಿಗೆ ಕಳ್ಳರು ಕನ್ನಾ ಹಾಕಿದ್ದಾರೆ. ಮಂಗಳವಾರ ರಾತ್ರಿ ದೇವಸ್ಥಾನದ ಬಳಿ ಯಾರು ಇಲ್ಲದೇ ವೇಳೆ ಕಳ್ಳರು ಮೊದಲು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ.

ಕ್ಯಾಮೆರಾ ಒಡೆದ ಬಳಿಕ ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿದ್ದಾರೆ. ಬಳಿಕ ದೇವರ ಮುಂದೆ ಇದ್ದ ಹುಂಡಿಯ ಬೀಗವನ್ನು ಒಡೆದು, ಭಕ್ತರು ಹಾಕಿದ್ದ ಹಣ ಮತ್ತು ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಸದ್ಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *