ಯುವ ಬ್ರಿಗೇಡ್ ಬಳ್ಳಾರಿಯಿಂದ ಸ್ವಚ್ಛತಾ ಕಾರ್ಯ – ಜನರ ಮೆಚ್ಚುಗೆಗೆ ಪಾತ್ರವಾದ ಯುವಕರ ಕೆಲಸ

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಭಿತ್ತಿ ಚಿತ್ರಗಳು ಜಾಹೀರಾತು ಫಲಕಗಳದ್ದೇ ಕಾರುಬಾರು. ಈ ಭಿತ್ತಿ ಚಿತ್ರಗಳನ್ನು ಎಲ್ಲಂದರಲ್ಲಿ ಅಂಟಿಸಿ ನಗರದ ಸೌಂದರ್ಯ ಹಾಳಾಗುತಿತ್ತು.

ಹೀಗಾಗಿ ಬಳ್ಳಾರಿಯ ಯುವ ಬ್ರಿಗೇಡ್ ಕಾರ್ಯಕರ್ತರ ವತಿಯಿಂದ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು, ಬಳ್ಳಾರಿ ನಗರದ ತಾಲೂಕು ಕಚೇರಿ ಬಸ್ ನಿಲ್ದಾಣದ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಮಾಡಿದ್ದಾರೆ. ಬ್ರಿಗೇಡ್ ಯುವಕರ ತಂಡ ಸ್ವಂತ ಖರ್ಚಿನಲ್ಲಿ ಈ ಕಲಸ ಮಾಡಿದ್ದು, ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಪೈಂಟ್ ಮಾಡಿದ್ದಾರೆ.

ಪ್ರತಿ ರವಿವಾರ ಈ ಯುವಕರ ಪಡೆ ಒಂದೊಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಯುವ ಬ್ರಿಗೇಡ್ ನಲ್ಲಿ ಬಹುತೇಕವಾಗಿ ವಿದ್ಯಾರ್ಥಿಗಳಿದ್ದು ಭಾನುವಾರದಲ್ಲಿ ಸಿನಿಮಾ ನೋಡಿ ಕಾಲಹರಣ ಮಾಡದೇ ನಗರವನ್ನು ಕ್ಲೀನ್ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಯುವಕರು ಈ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *