ಮೊಬೈಲ್ ಸಿಮ್‍ಗಾಗಿ ಜಗಳ – ತಾಯಿ, ಮಗನಿಗೆ ಚಾಕು ಇರಿತ

ಹುಬ್ಬಳ್ಳಿ: ಮೊಬೈಲ್ ಸಿಮ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿ ಹಾಗೂ ಮಗನಿಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ನಿಯಾಜ್ ಅಹ್ಮದ್ ಶೇಖ್ (29) ಮೇಹಬೂಬಿ ಶೇಖ್ (50) ಗಾಯಗೊಂಡಿದ್ದಾರೆ. ನಿಯಾಜ್ ಬೆನ್ನಿಗೆ ಹಾಗೂ ಮೇಹಬೂಬಿ ಅವರ ಬಲ ಭಾಗಕ್ಕೆ ಶಾರುಖ್ ಕಲಾದಗಿ, ಮಹ್ಮದ್ ಕಲಾದಗಿ, ಸಾದೀಖ್ ಹಾಗೂ ಸಂಗಡಿಗರು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಮೊಬೈಲ್ ಸಿಮ್ ವಿಷಯಕ್ಕೆ ಚಾಕುವಿನಿಂದ ಇರಿಯಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಆರೋಪಿ ಶಾರುಖ್ ಸಿಮ್‍ನ್ನು ನಿಯಾಜ್ ಶೇಖ್ ತಗೆದುಕೊಂಡಿದ್ದನಂತೆ. ಅದನ್ನು ಕೆಳಲು ಪದೇ ಪದೇ ಮನೆಗೆ ಬರುತ್ತಿದ್ದರು. ಆದರೆ ನಿನ್ನೆ ತನ್ನ ಸಿಮ್ ಕೊಡುವಂತೆ ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ತಾಯಿ ಹಾಗೂ ಮಗನ ಮೇಲೆ ಚಾಕು ಇರಿದು ಪರಾರಿಯಾಗಿದ್ದಾರೆ.

ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕಸಬಾಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *