ವೃದ್ಧನ ಮೇಲೆ ಒಂಟಿ ಸಲಗ ದಾಳಿ

ಮೈಸೂರು: ಆಹಾರ ಅರಸಿ ಗ್ರಾಮಕ್ಕೆ ಬಂದ ಒಂಟಿ ಸಲಗ ಗ್ರಾಮಕ್ಕೆ ನುಗ್ಗಿ ವೃದ್ಧನ ಮೇಲೆ ಆನೆ ದಾಳಿ ನಡೆಸಿರೋ ಘಟನೆ ಮೈಸೂರಿನ ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ನಡೆದಿದೆ.

68 ವರ್ಷದ ರಾಮಯ್ಯ ಕಾಡಾನೆ ದಾಳಿಗೆ ಒಳಗಾದ ಗ್ರಾಮಸ್ಥ. ಗಾಯಗೊಂಡ ರಾಮಯ್ಯಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗೆ ಡೈರಿಗೆ ಹಾಲನ್ನು ಹಾಕಲು ರಾಮಯ್ಯ ತೆರಳುವಾಗ ಏಕಾಏಕಿ ದಾಳಿ ನಡೆಸಿದ ಒಂಟಿ ಸಲಗ ರಾಮಯ್ಯನನ್ನ ತಳ್ಳಿ ಬೀಳಿಸಿದೆ. ರಾಮಯ್ಯನ ಚೀರಾಟ ಕೇಳಿ ಗ್ರಾಮಸ್ಥರು ಓಡಿ ಬಂದಿದ್ದಾರೆ.

ಗ್ರಾಮಸ್ಥರ ಚೀರಾಟ ಕೇಳಿ ಆನೆ ಓಡಿ ಹೋಗಿ ಗ್ರಾಮದ ಜಮೀನೊಂದರಲ್ಲಿ ಬೀಡು ಬಿಟ್ಟಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಚರಣೆ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ.

Comments

Leave a Reply

Your email address will not be published. Required fields are marked *