ಉದ್ಘಾಟನೆಗೊಂಡ ತಿಂಗ್ಳಲ್ಲೇ ಎಲ್ಲವೂ ಮಂಗಮಾಯ- ಕೊಪ್ಪಳದಲ್ಲಿ ರೈಲು ಪ್ರಯಾಣಿಕರು ಪರದಾಟ

ಕೊಪ್ಪಳ: ಕತ್ತಲಲ್ಲಿ ರೈಲ್ವೆ ಪ್ರಯಾಣಿಕರು ಪರದಾಡುತ್ತಿದ್ದು, ಇದನ್ನು ನೋಡಿಯೂ ಅಧಿಕಾರಿಗಳು ಕ್ಯಾರೇ ಎನ್ನದೇ ಇರುವುದು

ಆರು ತಿಂಗಳ ಹಿಂದಷ್ಟೇ ಕೊಪ್ಪಳದ ಗಂಗಾವತಿಯಲ್ಲಿ ರೈಲ್ವೆ ನಿಲ್ದಾಣ ಉದ್ಘಾಟನೆಗೊಂಡಿತ್ತು. ಸಂಸದ ಸಂಗಣ್ಣ ಕರಡಿ ಅವರು ಈ ರೈಲ್ವೆ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆದರೆ ಈಗ ಈ ರೈಲ್ವೆ ನಿಲ್ದಾಣದಲ್ಲಿ ಕರೆಂಟ್ ಹೋಗಿ ಐದು ತಿಂಗಳು ಆಯಿತು.

ಉದ್ಘಾಟನೆಗೊಂಡ ಒಂದೇ ತಿಂಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಎಲ್ಲವೂ ಮಂಗ ಮಾಯವಾಗಿದ್ದು, ಕರೆಂಟ್, ಬಸ್, ಸುರಕ್ಷತೆ, ಇಲ್ಲದಂತಾಗಿದೆ. ರಾತ್ರಿ 9:30ಕ್ಕೆ ಹುಬ್ಬಳ್ಳಿಯಿಂದ ಬರುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲದೆ ಮೊಬೈಲ್ ಟಾರ್ಚ್ ಹಾಕಿಕೊಂಡು ರೈಲ್ವೆ ನಿಲ್ದಾಣದಲ್ಲಿ ಇಳಿಯುವ ಪರಿಸ್ಥಿತಿ ಬಂದಿದೆ.

ರೈಲ್ವೆ ನಿಲ್ದಾಣದಲ್ಲಿ ಹೆಸರಿಗೆ ಮಾತ್ರ ಸಾಲು-ಸಾಲು ವಿದ್ಯುತ್ ಕಂಬ ಅಳವಡಿಸಲಾಗಿದ್ದು, ಒಂದು ಕಂಬದಲ್ಲೂ ದ್ವೀಪ ಉರಿಯಲ್ಲ. ಹುಬ್ಬಳ್ಳಿಯಿಂದ ಗಂಗಾವತಿಗೆ 75 ರೂ. ಕೊಟ್ಟರೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ 50 ರೂ. ಆಟೋ ಚಾರ್ಜ್ ಆಗುತ್ತದೆ. ಇಲ್ಲವೆಂದರೆ ಪ್ರಯಾಣಿಕರು ಸುಮಾರು 3 ಕಿ.ಮೀ ಕತ್ತಲಲ್ಲೇ ನಡೆದುಕೊಂಡು ಹೋಗಬೇಕಾಗುತ್ತದೆ.

ಸದ್ಯ ಪ್ರಯಾಣಿಕರು ರೈಲ್ವೆ ಆಡಳಿತದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ದ್ವೀಪ ಅಳವಡಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಸಂಸದ ಸಂಗಣ್ಣ ಕರಡಿ ಅವರಿಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *