ಟಿಪ್ಪು ಹೆಸ್ರು ಕೇಳಿದ್ರೆ ಬ್ರಿಟಿಷರು, ಬಿಜೆಪಿಯವ್ರು ಚಡ್ಡಿ ಒದ್ದೆ ಮಾಡ್ಕೋತಾರೆ- ಚರ್ಚೆಯಾಗ್ತಿದೆ ಎಎಸ್‌ಐ ಸ್ಟೇಟಸ್

ಶಿವಮೊಗ್ಗ: ಟಿಪ್ಪು ಜಯಂತಿ ವಿವಾದದ ನಡುವೆಯೇ ಪೊಲೀಸ್ ಅಧಿಕಾರಿಯ ದುರ್ನಡತೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಟಿಪ್ಪು ಸುಲ್ತಾನ್ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಹಾಕಿಕೊಂಡಿದ್ದ ವಾಟ್ಸಪ್ ಸ್ಟೇಟಸ್‌ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಸೊರಬ ಪಟ್ಟಣ ಪೊಲೀಸ್ ಠಾಣೆಯ ಎಎಸ್‌ಐ ಶಬ್ಬೀರ್ ಖಾನ್, ಟಿಪ್ಪು ಸುಲ್ತಾನ್ ಪರವಾಗಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ದುರ್ನಡತೆ ಮೆರೆದ ಅಧಿಕಾರಿ. ಸದ್ಯ ರಾಜ್ಯದಲ್ಲಿ ಟಿಪ್ಪು ಜಯಂತಿ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಒಂದೆಡೆ ಕಾಂಗ್ರೆಸ್ ಟಿಪ್ಪು ಜಯಂತಿ ಮಾಡಿ ಎನ್ನುತ್ತಿದ್ದರೆ, ಬಿಜೆಪಿ ನಾವು ಮಾತ್ರ ಟಿಪ್ಪು ಜಯಂತಿ ಮಾಡಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಎಎಸ್‌ಐ ಶಬ್ಬೀರ್ ಖಾನ್ ಅವರು ಟಿಪ್ಪು ಪರವಾಗಿ ಸ್ಟೇಟಸ್ ಹಾಕಿಕೊಂಡು ಬಿಜೆಪಿಗರನ್ನು ಹೀಗೆಳೆದಿದ್ದಾರೆ.

ಬ್ರಿಟಿಷರು ಮತ್ತು ಬಿಜೆಪಿಯವರು ಟಿಪ್ಪು ಹೆಸರು ಕೇಳಿದಾಕ್ಷಣ ಚಡ್ಡಿ ಒದ್ದೆ ಮಾಡಿಕೊಳ್ಳುತ್ತಾರೆ ಎಂದು ಸ್ಟೇಟಸ್‌ನಲ್ಲಿ ಬರೆದುಕೊಂಡು ಬಿಜೆಪಿಯನ್ನು ಟೀಕಿಸಿದ್ದಾರೆ. ಈ ಹಿನ್ನೆಲೆ ಅಧಿಕಾರಿ ವಿರುದ್ಧ ಬಿಜೆಪಿ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಪೊಲೀಸ್ ಅಧಿಕಾರಿಯ ಈ ನಡವಳಿಕೆಯಿಂದಾಗಿ ಬಿಜೆಪಿ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿ ಒಂದು ವರ್ಗದ ಪರ ನಡವಳಿಕೆ ಮೆರೆದಿದ್ದಾರೆ. ಇದು ತಪ್ಪು ಎಂದು ಸ್ಥಳೀಯ ಬಿಜೆಪಿಗರು ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *