ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು – ಕೊರೆಯುವ ಚಳಿ, ಮಳೆಯಲ್ಲಿ ವೃದ್ಧನ ಬದುಕು

ಬೆಂಗಳೂರು: ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವ ಅದೆಷ್ಟೋ ಉದಾಹರಣೆಗಳಿವೆ. ಹೀಗೆ ಕೆಲವರು ಆಸ್ತಿಗಾಗಿ ಪೋಷಕರನ್ನೇ ಮನೆಯಿಂದ ಹೊರಹಾಕಿದ ಘಟನೆಗಳು ಕೂಡ ನಡೆದಿದೆ. ಹೀಗಿರುವಾಗ ಇಲ್ಲಿಬ್ಬರು ಪುತ್ರರು 70 ವರ್ಷದ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ್ದಾರೆ.

ಲಗ್ಗೆರೆಯ ಕಾವೇರಿನಗರದ ನಿವಾಸಿಯಾದ ವೃದ್ಧ ನರಸಿಂಹಯ್ಯ ಈಗ ನಡುಬೀದಿಯಲ್ಲಿ ಮಲಗುವಂತ ಪರಿಸ್ಥಿತಿ ಬಂದಿದೆ. ನರಸಿಂಹಯ್ಯಗೆ ನಾಗರಾಜ್ ಮತ್ತು ರಾಘವೇಂದ್ರ ಎಂದು ಇಬ್ಬರು ಮಕ್ಕಳಿದ್ದಾರೆ. ನರಸಿಂಹಯ್ಯ ತನ್ನ ಬಳಿಯಿದ್ದ ಹಣದಿಂದ ಸ್ವಂತ ಮನೆ ಕಟ್ಟಿಸಿದ್ದು, ಅದರಲ್ಲೇ ವಾಸವಾಗಿದರು. ಯಾವಾಗ ತಂದೆಗೆ ಸ್ಟೋಕ್ ಆಯ್ತೋ ಅವರಿಗೆ ಹಿಂಸೆ ಕೊಟ್ಟು, ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ದಿನ ಕಳೆದಂತೆ ಇಬ್ಬರೂ ಮಕ್ಕಳು ತಂದೆಯನ್ನು ಬಿಟ್ಟು ಬೇರೆಡೆ ಮನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂದೆ ಕಟ್ಟಿಸಿದ ಮನೆಯನ್ನು ಕೂಡ ಗೊತ್ತಾಗದಂತೆ ಬೇರೆಯವರಿಗೆ ಬಾಡಿಗೆಗೆ ಕೊಟ್ಟು, ಅದನ್ನೂ ಬೀಗ ಹಾಕಿ ಹೊರದಬ್ಬಿದ್ದಾರೆ. ತಿನ್ನಲು ಊಟವಿಲ್ಲದೆ ಮಲಗಲೂ ಜಾಗವಿಲ್ಲದೆ ಮನೆ ಮುಂದೆಯೇ ಒದ್ದಾಡುವಂಥಾಗಿದೆ. ಇದನ್ನು ನೋಡಿದ ಲಗ್ಗೆರೆಯ ಅಕ್ಕಪಕ್ಕ ನಿವಾಸಿಗಳು ಚಳಿಯಲ್ಲಿ ನಡುಗುತ್ತಿದ್ದ ವೃದ್ಧನಿಗೆ ಬ್ಲಾಂಕೆಟ್ ಹೊದಿಸಿ, ತಿಂಡಿ ನೀಡಿದ್ದಾರೆ.

ಈ ನಡುವೆ ಮಕ್ಕಳ ಜೊತೆ ಹೋಗಿರುವ ಪತ್ನಿಗೆ ಪತಿ ಕೂಡ ಬೇಡವಾಗಿದೆ. ಮತ್ತೊಂದು ವಿಷಯ ಏನೆಂದರೆ ಇಬ್ಬರು ಮಕ್ಕಳು ಸ್ಟಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಲಕ್ಷಾಂತರ ರೂ. ಸಂಬಳ ಕೂಡ ತೆಗೆದುಕೊಳ್ಳುತ್ತಾರೆ.

ನಂದಿನಿ ಲೇಔಟ್ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಮಕ್ಕಳನ್ನು ಸಂಪರ್ಕ ಮಾಡಲು ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *