ಕುರಿ ಕದಿಯಲು ಕಾರಿನಲ್ಲಿ ಬಂದು ಕಾರನ್ನೇ ಬಿಟ್ಟು ಓಡಿದ್ರು

ಮಂಡ್ಯ: ಕುರಿ ಕದಿಯಲು ಕಾರಿನಲ್ಲಿ ಬಂದಿದ್ದ ಕಳ್ಳರು ಕಾರು ಬಿಟ್ಟು ಓಡಿದ ಹೋದ ಘಟನೆ ಮದ್ದೂರು ತಾಲೂಕಿನಲ್ಲಿ ನಡೆದಿದೆ.

ಕೆಲವು ಯುವಕರು ಕುರಿ ಕಳ್ಳತನ ಮಾಡಲು ಕಾರಿನಲ್ಲಿ ವಳಗೆರೆಹಳ್ಳಿ ಗ್ರಾಮಕ್ಕೆ ಬಂದಿದ್ದರು. ಕುರಿಗಳನ್ನು ಕಾರಿನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಕಾರನ್ನು ನೋಡಿದ ಗ್ರಾಮಸ್ಥರು ದೊಣ್ಣೆ ಹಿಡಿದು ಹಿಂಬಾಲಿಸಿದ್ದಾರೆ. ಇದರಿಂದ ಗಾಬರಿಗೊಂಡ ಕಳ್ಳರು ರಸ್ತೆಯಿಂದ ಕಾರನ್ನು ಜಮೀನಿಗೆ ನುಗ್ಗಿಸಿದ್ದಾರೆ. ಕಾರಿನ ಲೈಟ್ ಆಫ್ ಮಾಡಿ ತಕ್ಷಣವೇ ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ.

ಕಳ್ಳರು ಸ್ಥಳದಲ್ಲೇ ಬಿಟ್ಟು ಹೋಗಿದ್ದ ಕಾರಿನಿಂದ ಕುರಿಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಕೂಡ ವಳಗೆರೆಹಳ್ಳಿ ಗ್ರಾಮದಲ್ಲಿ 15 ಕುರಿಗಳು ಕಳ್ಳತನವಾಗಿದ್ದವು.

Comments

Leave a Reply

Your email address will not be published. Required fields are marked *