ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಗೆ ಪುರಸ್ಕಾರ

ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ದರೋಡೆಕೋರರೊಂದಿಗೆ ಹೋರಾಡಿ ಜೀವ ಉಳಿಸಿಕೊಂಡಿದ್ದ ವೃದ್ಧ ದಂಪತಿಗೆ ತಮಿಳುನಾಡು ರಾಜ್ಯ ಸರ್ಕಾರ ಸಹಾಸ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತಮಿಳುನಾಡಿನ ತಿರುವನ್ವೇಲಿಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿತ್ತು. ವೃದ್ಧ ದಂಪತಿಗಳಾದ 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದರು. ಇಬ್ಬರು ದರೋಡೆಕೋರರೊಂದಿಗೆ ಹೋರಾಟ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ದಂಪತಿಯ ಸಹಾಸಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ವಿಡಿಯೋದಲ್ಲೇನಿದೆ..?
ದಂಪತಿ ಭಾನುವಾರ ರಾತ್ರಿ ಊಟ ಮುಗಿಸಿದ್ದ ಕಡಾಯಮ್ ನ ತಮ್ಮ ಮನೆಯ ಹೊರಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಪತ್ನಿ ಎದ್ದು ಮನೆಯೊಳಗೆ ಹೋಗುತ್ತಾರೆ. ಪತಿ ಅಲ್ಲೇ ಕುಳಿತಿದ್ದು, ಅವರ ಹಿಂದಿನಿಂದ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬರುತ್ತಾನೆ. ಅಲ್ಲದೆ ಆತ ತನ್ನ ಕೈಯಲಿದ್ದ ಟವೆಲನ್ನು ಅಜ್ಜನ ಕುತ್ತಿಗೆಗೆ ಸುತ್ತಿ ಅಲ್ಲೇ ಕಂಬಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಅಲ್ಲಿಗೆ ಆಗಮಿಸುತ್ತಾನೆ.

ಇದರಿಂದ ಗಾಬರಿಗೊಂಡ ಶನ್ಮುಗವೆಲ್ ಜೋರಾಗಿ ಕಿರುಚಿಕೊಂಡಿದ್ದು, ಕೂಡಲೇ ಪತ್ನಿ ಮನೆಯೊಳಗಿಂದ ಓಡಿ ಬಂದಿದ್ದು, ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರೂ ದಾಳಿಕೋರರ ವಿರುದ್ಧ ಹೋರಾಡಿದ್ದರು. ದರೋಡೆಕೋರರಲ್ಲಿ ಕೈಯಲ್ಲಿ ಆಯುಧವಿದ್ದರು ಕೂಡ ದಾಳಿಕೋರರಿಂದ ವೃದ್ಧ ದಂಪತಿ ತಮ್ಮ ಧೈರ್ಯದಿಂದ ಪರಾಗಿದ್ದರು. ಇಬ್ಬರ ಧೈರ್ಯ ಕಂಡ ದರೋಡೆಕೋರರು ಏನೂ ಮಾಡಲಾಗದೆ ಸ್ಥಳದಿಂದ ಎಸ್ಕೇಪ್ ಆಗಿದ್ದರು.

ಸಿಎಂ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಶನ್ಮುಗವೆಲ್ ಅವರು, ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದಿರುವುದು ಹೆಮ್ಮೆ ಎನಿಸಿದೆ. ತಮ್ಮ ದೂರಿನ ಮೇರೆಗೆ ಬಹುಬೇಗ ಸಂಘಟನೆ ಬಗ್ಗೆ ಸ್ಪಂಧಿಸಿದ ಪೊಲೀಸರಿಗೆ ನಾವು ಧನ್ಯವಾದ ಹೇಳುತ್ತೇವೆ. ಇಂದಿನ ಯುವ ಸಮುದಾಯಕ್ಕೆ ನಾವು ಸ್ಫೂರ್ತಿಯಾಗಿ ನಿಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.

Comments

Leave a Reply

Your email address will not be published. Required fields are marked *