ಕೆಆರ್ ಪೇಟೆ ಎಲೆಕ್ಷನ್‍ಗೆ ದಳಪತಿಗಳ ಭರ್ಜರಿ ಸಿದ್ಧತೆ- ಲೋಕಸಮರದಲ್ಲಿ ಸೋತ ನಿಖಿಲ್‍ಗೆ ಸಿಗುತ್ತಾ ಟಿಕೆಟ್?

ಬೆಂಗಳೂರು: ಇಂದು ಕೆ.ಆರ್ ಪೇಟೆಯ ಜೆಡಿಎಸ್ ಅಭ್ಯರ್ಥಿ ಫೈನಲ್ ಆಗುತ್ತಾ ಎನ್ನುವ ಚರ್ಚೆ ವ್ಯಾಪಕವಾಗಿದೆ.

ನಾರಾಯಣಗೌಡ ಅನರ್ಹತೆಯಿಂದಾಗಿ ಕೆ.ಆರ್ ಪೇಟೆ ಕ್ಷೇತ್ರಕ್ಕೆ ನಿಖಿಲ್ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಎಚ್.ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಸಂಬಂಧ, ಇಂದು ಕೆ.ಆರ್ ಪೇಟೆಗೆ ಭೇಟಿ ನೀಡುತ್ತಿದ್ದು, ಸಂಜೆ 4 ಗಂಟೆಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸಲಿದ್ದಾರೆ. ಕೆ.ಆರ್ ಪೇಟೆ ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಚರ್ಚೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಚಿವರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿಸುವ ಹಿಂದಿರುವ ಲೆಕ್ಕಾಚಾರ:
1) ಜೆಡಿಎಸ್ ಭದ್ರಕೋಟೆಯಾದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಗೆಲುವು ಸುಲಭವಾಗಲಿದೆ.
2) ಕುಮಾರಸ್ವಾಮಿಯವರ ಸರ್ಕಾರ ಕೆಡವಲು ನಾರಾಯಣಗೌಡರು ಸಹ ಕಾರಣ ಎನ್ನುವ ಜನರ ಸಿಟ್ಟು ಸಹಾಯವಾಗಲಿದೆ.
3) ಒಕ್ಕಲಿಗ ಸಮುದಾಯದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಹಾಯವಾಗಲಿದೆ.
4) ಶಾಸಕರ ಬಂಡಾಯದಿಂದ ಅಧಿಕಾರ ಕಳೆದುಕೊಂಡ ಕುಮಾರಸ್ವಾಮಿಯವರ ಬಗ್ಗೆ ಇರುವ ಸಿಂಪತಿ ಮರವಾಗಿ ಪರಿವರ್ತನೆ ಆಗಲಿದೆ.
5) ಲೋಕಸಭಾ ಚುನಾವಣೆಯಲ್ಲಿ ಸೋತ ನಿಖಿಲ್ ಅವರನ್ನು ಈ ಬಾರಿ ಜನ ಅನುಕಂಪದಲ್ಲಿ ಕೈ ಹಿಡಿತಾರೆ ಎನ್ನುವ ಲೆಕ್ಕಾಚಾರ.
6) ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿದ್ರು ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ.
7) ಕಾಂಗ್ರೆಸ್‍ಗಿಂತ ಜೆಡಿಎಸ್ ವಿಚಾರದಲ್ಲಿ ಜನರಿಗೆ ಅನುಕಂಪ ಇದೆ ಎನ್ನುವ ಅಂಶ ಸಹಾಯವಾಗಬಹುದು.

ಹೀಗೆ ಎಲ್ಲಾ ರೀತಿಯಲ್ಲೂ ಅಳೆದು ತೂಗಿ ನಿಖಿಲ್ ಅವರನ್ನ ಅಭ್ಯರ್ಥಿಯಾಗಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *