ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಬಲಿಯಾಯ್ತು ಸರ್ಪ

ಬೆಂಗಳೂರು: ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಸರ್ಪವೊಂದು ಬಲಿಯಾದ ಘಟನೆ ರಮಡ ರೆಸಾರ್ಟ್ ಮುಂದಿನ ಹೊನ್ನೆನಹಳ್ಳಿ ರಸ್ತೆಯಲ್ಲಿ ನಡೆದಿದೆ.

ರಮಡ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಇನೋವಾ ಕಾರು ಹೊರಬಂದಿತ್ತು. ಅದರಲ್ಲಿ ಶಾಸಕರೊಬ್ಬರು ಕೂಡ ಇದ್ದರು. ಈ ವೇಳೆ ರೆಸಾರ್ಟ್ ಮುಂದಿನ ರಸ್ತೆಯಲ್ಲಿ ಹಾವು ದಾಟುತ್ತಿತ್ತು. ನಿಧಾನವಾಗಿ ಸಾಗುತ್ತಿದ್ದ ಹಾವಿನ ಮೇಲೆ ಕಾರು ಹರಿದಿದ್ದು, ಸರ್ಪವು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.

ಶಾಸಕರ ಹೆಸರು ಹೇಳಲಿಕ್ಕೆ ಸ್ಥಳೀಯರು ಭಯಪಡುತ್ತಿದ್ದು, ಮಾಹಿತಿ ಮಾತ್ರ ನೀಡಿದ್ದಾರೆ. ಹಾವಿನ ತಲೆ ಹಾಗೂ ಹೊಟ್ಟೆಯ ಮೇಲೆ ಕಾರು ಹರಿದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಬಳಿಕ ಹಾವಿನ ಮೃತ ದೇಹವನ್ನು ಸ್ಥಳೀಯರು ಎತ್ತಿ ರಸ್ತೆ ಬದಿಗೆ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *