ಮೈತ್ರಿ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ: ಕೋಡಿಮಠದ ಶ್ರೀ

ದಾವಣಗೆರೆ: ಈ ಮೈತ್ರಿ ಸರ್ಕಾರಕ್ಕೆ ಆಯುಷ್ಯವಿಲ್ಲ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿಗಳು ಹೇಳಿಕೆ ನೀಡಿದ್ದಾರೆ.

ಚುನಾವಣೆ ಪೂರ್ವದಲ್ಲಿಯೂ ನಾನು ಮೈತ್ರಿ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಎಂದು ಹೇಳಿದ್ದೆ. ಇಂದು ಸಹ ನಾನು ಅದೇ ಮಾತುಗಳನ್ನು ಹೇಳುತ್ತೇನೆ. ಬಿತ್ತಿದ ಬೆಳೆಸು ಪರರು ಕೊಯ್ದಾರು, ಬಿತ್ತಿದ ಬೀಜ ಒಂದು, ಫಸಲು ಇನ್ನೊಂದು ಎಂದು ಮಾರ್ಮಿಕವಾಗಿ ಮೈತ್ರಿ ಸರ್ಕಾರದ ಆಯುಷ್ಯದ ಬಗ್ಗೆ ಭವಿಷ್ಯ ನುಡಿದರು. ಇದನ್ನೂ ಓದಿ: ಗ್ರಹಣದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಕೋಡಿ ಶ್ರೀ ಭವಿಷ್ಯ

ಈ ಸರ್ಕಾರಕ್ಕೆ ಕೇವಲ ಒಂದು ವರ್ಷ ಅಥವಾ 18 ತಿಂಗಳು ಮಾತ್ರ ಆಯುಷ್ಯ ಅಂತಾ ಹೇಳಿದ್ದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮತ ಯಾಚನೆ ಮಾಡಲು ಹೋಗಲಿದ್ದಾರೆ ಎನ್ನುವ ಮೂಲಕ ಮಧ್ಯಂತರ ಚುನಾವಣೆಯ ಸುಳಿವನ್ನು ನೀಡಿದರು. ಸ್ವಲ್ಪ ಗಾಳಿ-ಗುಡುಗು ಜೊತೆ ಮುಂದಿನ ದಿನಗಳಲ್ಲಿ ಉತ್ತಮ ಮಳೆ ಆಗಲಿದೆ. ರಾಜ್ಯಕ್ಕೆ ನೀರು ಬರುತ್ತದೆ. ಹಾಗಾಗಿ ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಜನತೆಗೆ ತಿಳಿಸಿದರು. ಇದನ್ನೂ ಓದಿ: ರಾಜಕೀಯ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀಗಳಿಗೆ ನೋಟಿಸ್

Comments

Leave a Reply

Your email address will not be published. Required fields are marked *