ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

ಬೆಳಗಾವಿ: ನಗರದಲ್ಲಿರುವ ಪ್ರಸಿದ್ಧ ಕೋಟೆ ಕೆರೆಯ ಗಾರ್ಡನ್ ಪ್ರವೇಶಕ್ಕೆ ಜಿಲ್ಲಾಡಳಿತ ಪ್ರವೇಶ ಶುಲ್ಕ ನಿಗದಿ ಮಾಡಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಸ್ಥಳೀಯ ಮತ್ತು ಅಕ್ಕಪಕ್ಕದ ಕಾಲೋನಿ ಜನರಿಗೆ ಕೆರೆಯ ಮೇಲಿರುವ ಗಾರ್ಡನ್ ವಾಯುವಿವಾರ ಸೇರಿದಂತೆ ಮಕ್ಕಳಿಗೆ ಆಟವಾಡಲು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ಕುಳಿತು ರಿಲ್ಯಾಕ್ಸ್ ಮಾಡಲು ಅನುಕೂಲ ಆಗಿತ್ತು. ಈಗ ಪ್ರತಿಯೊಬ್ಬರಿಗೂ ಹತ್ತು ರೂಪಾಯಿ ಶುಲ್ಕ ವಿಧಿಸಿದ್ದರಿಂದ ನಿತ್ಯವೂ ಹಣ ಕೊಟ್ಟು ಕೆರೆಯ ಉದ್ಯಾನವನಕ್ಕೆ ಹೋಗಲು ಆಗುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

ಇಂದು ಬೆಳಗ್ಗೆ ಜಿಲ್ಲಾಡಳಿತದ ವಿರುದ್ಧ ಧರಣಿ ಮಾಡಿ ಆಕ್ರೋಶ ಹೊರ ಹಾಕಿದ್ದು, ಕೂಡಲೇ ಪ್ರವೇಶ ಶುಲ್ಕ ಪಡೆಯುವ ಆದೇಶ ಹಿಂಪಡೆಯುವಂತೆ ಸ್ಥಳೀಯರು ಆಗ್ರಹಿಸಿದರು.

Comments

Leave a Reply

Your email address will not be published. Required fields are marked *