ಎಬಿಡಿ ದೇಶದ ಬದಲು ಹಣವನ್ನ ಆಯ್ಕೆ ಮಾಡಿಕೊಂಡಿದ್ದಾರೆ: ಶೋಯೆಬ್ ಅಖ್ತರ್

ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ದೇಶವನ್ನು ಆಯ್ಕೆ ಮಾಡಿಕೊಳ್ಳದೆ ಹಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ. ಅಖ್ತರ್ ಅವರು ಮಾತನಾಡಿರುವ ವಿಡಿಯೋ ಯೂಟ್ಯೂಬ್‍ನಲ್ಲಿ ಆಪ್‍ಲೋಡ್ ಮಾಡಲಾಗಿದೆ.

ಮೊದಲಿಗೆ ಎಬಿ ಡಿವಿಯರ್ಸ್ ಅವರ ಮೇಲೆ ಐಪಿಎಲ್ ಹಾಗೂ ಪಿಎಸ್‍ಎಲ್ ಟೂರ್ನಿಗಳ ಒಪ್ಪಂದವನ್ನು ಮುರಿದುಕೊಳ್ಳಲು ಒತ್ತಡ ಹಾಕಲಾಗಿತ್ತು. ಇದರಿಂದ ಪಾರಾಗಲು ನಿರ್ಧರಿಸಿದ್ದ ಎಬಿಡಿ ವಿಶ್ವಕಪ್ ಮುನ್ನವೇ ನಿವೃತ್ತಿ ಘೋಷಣೆ ಮಾಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ವಿರುದ್ಧ ಸೋಲುಂಡಿದ್ದ ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಸೋಲು ಕಂಡಿತ್ತು. ಇದೇ ವೇಳೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಎಬಿಡಿ ಕೊನೆಯ ಪ್ರಯತ್ನ ನಡೆಸಿದ್ದರು ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಖ್ತರ್, ಎಬಿಡಿಗೆ ದೇಶಕ್ಕಿಂತ ಹಣವೇ ಮುಖ್ಯವಾಗಿತ್ತು ಎಂದಿದ್ದಾರೆ.

ಹಣ ಇಂದು ಅಥವಾ ನಾಳೆ ಬರುತ್ತದೆ. ಆದರೆ ಎಬಿಡಿ ಇದನ್ನು ತಿಳಿದು ದೇಶದ ತಂಡಕ್ಕೆ ತಮ್ಮ ಅಗತ್ಯತೇ ಮನಗಂಡು ನಿರ್ಧಾರ ಕೈಗೊಳ್ಳಬೇಕಿತ್ತು. ವಿಶ್ವಕಪ್‍ಗೆ 1 ವರ್ಷ ಮುಂಚಿತವಾಗಿ ಎಬಿಡಿ ನಿವೃತ್ತಿ ಘೋಷಿಸಿದ್ದರು ಕೂಡ ದಕ್ಷಿಣ ಆಫ್ರಿಕಾ ತಂಡ ಫಾರ್ಮ್‍ನಲ್ಲಿ ಇರಲಿಲ್ಲ. ದೇಶ ವಿಚಾರ ಬಂದಾಗ ಹಣಕ್ಕೆ ಪ್ರಾಮುಖ್ಯತೆ ನೀಡಬಾರದಿತ್ತು. ವಿಶ್ವಕಪ್‍ಗೆ ಮತ್ತೆ ಎಬಿಡಿ ಅವರನ್ನ ಆಯ್ಕೆ ಮಾಡದೆ ಉತ್ತಮ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *