ಮಳೆಗಾಗಿ ಸಚಿವ ಡಿಕೆಶಿ ವಿಶೇಷ ಪೂಜೆ – ಋಷ್ಯಶೃಂಗ ದೇವಾಲಯದಲ್ಲಿ ಪರ್ಜನ್ಯ ಹೋಮ

ಚಿಕ್ಕಮಗಳೂರು: ಮುಂಗಾರು ಮಳೆ ವಿಳಂಬ ಹಿನ್ನೆಲೆ ರಾಜ್ಯದಲ್ಲಿ ಜಪ-ತಪ ಶುರುವಾಗಿದೆ. ಇಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಪಿ.ಟಿ ಪರಮೇಶ್ವರ್ ನಾಯ್ಕ್ ಶೃಂಗೇರಿಗೆ ತೆರಳಿದ್ದಾರೆ. ಮಳೆಗಾಗಿ ಶಾರದಾಂಬೆ ಹಾಗೂ ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾ ಸಮೀಪದ ಋಷ್ಯಶೃಂಗ ದೇವಾಲಯದಲ್ಲಿ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಳೆಗಾಗಿ ಪರ್ಜನ್ಯ ಹೋಮ, ಜಪ ಮಾಡಲಿದ್ದಾರೆ.

ಜಿಲ್ಲೆಯ ಶೃಂಗೇರಿಯಲ್ಲಿರೋ ಋಷ್ಯಶೃಂಗ ದೇವಾಲಯದಲ್ಲಿ ನಾಳೆ ಮುಂಜಾನೆ 5.30ಕ್ಕೆ ಮಳೆಗಾಗಿ ಪರ್ಜನ್ಯ ಹೋಮ, ಜಪ ನಡೆಯಲಿದೆ. ಈ ಹಿಂದೆ ಕೂಡ ಮಳೆಗಾಗಿ ಡಿಕೆಶಿ ಇಲ್ಲಿ ಬೇಡಿಕೊಂಡಿದ್ದರು. ಆ ಬಳಿಕ ನಾಡಿನಲ್ಲಿ ಸಮೃದ್ಧ ಮಳೆಯಾಗಿತ್ತು. ಮಳೆಯಾದ ಮೇಲೆ ಕ್ಷೇತ್ರಕ್ಕೆ ಮತ್ತೆ ಭೇಟಿ ನೀಡಿದ್ದ ಸಚಿವರು ಹರಕೆ ತೀರಿಸಿದ್ದರು.

Comments

Leave a Reply

Your email address will not be published. Required fields are marked *