2 ಎತ್ತುಗಳು ಯಾವ ಸಂತೆಯಲ್ಲೂ ಮಾರಾಟವಾಗಲ್ಲ- ಪ್ರಿಯಾಂಕ್ ಖರ್ಗೆ

ಕಲಬುರಗಿ: ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಹಾಗೂ ಉಮೇಶ್ ಜಾಧವ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಚಿಂಚೋಳಿಯ ಚೆಂಗಟಾ ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಲೀಕಯ್ಯ ಹಾಗೂ ಬಾಬುರಾವ್ ಚಿಂಚನಸೂರ್ ಜೋಡೆತ್ತು ಅಲ್ಲ. ಅವರು ಕಳ್ಳೆತ್ತುಗಳು. ಈ ಎರಡು ಎತ್ತುಗಳನ್ನು ಯಾವ ಸಂತೆಯಲ್ಲಿ ಮಾರಾಟ ಮಾಡಲು ಹೋದರೂ ಅವುಗಳು ಮಾರಾಟವಾಗಲ್ಲ ಎಂದು ಲೇವಡಿ ಮಾಡಿದ್ದಾರೆ.

ಈ ಎತ್ತುಗಳು ತಮ್ಮ ಜಮೀನಿನಲ್ಲಿ ಮೇಯೋದಿಲ್ಲ. ಅವು ಬರೀ ಬೇರೆಯವರ ಜಮೀನಿನಲ್ಲಿ ಮೇಯೋದೇ ಕಾಯಕವಾಗಿದೆ. ಇವರಿಬ್ಬರು ಜೊಡೆತ್ತುಗಳಂತೆ ಕೆಲಸ ಮಾಡಿ ಖರ್ಗೆಯನ್ನು ಸೋಲಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇಂತಹ ಸೋತ ಎತ್ತುಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಇತ್ತೀಚೆಗೆ ಬಿಜೆಪಿ ಸೇರಿರುವ ಜಾಧವ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಜಾಧವ್ ಅವರ ತಂದೆ ಮೋದಿ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಇರೋದು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ ಎಂದರು.

Comments

Leave a Reply

Your email address will not be published. Required fields are marked *