ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

ಮೈಸೂರು: ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಮತದಾನ ಜಾಗೃತಿಗಳು ಮೂಡಿ ಬಂದಿದೆ. ಆದ್ರೆ ಮೈಸೂರಿನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ದಂತ ಚಿಕಿತ್ಸೆ ನೀಡಲಾಗುತ್ತಿದೆ.

ಹೌದು. ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕಿಟೆಕ್ ಡೆಂಟಲ್ ಕ್ಲಿನಿಕ್ ನಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.


ಮೈಸೂರಿನ ಅನಿಫೌಂಡೇಶನ್ ವತಿಯಿಂದ ಈ ವಿಶಿಷ್ಟ ಅಭಿಯಾನ ನಡೆದಿದೆ. ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಮಾಡಿ ಬಂದು ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೆ ಅಲ್ಲಿವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *