ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರರಾದ್ರೆ ನಾವೆಲ್ಲ ಏನು: ಸಿದ್ದರಾಮಯ್ಯ ಟಾಂಗ್

-ಮೋದಿ ಅವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ನೀವು ಚೌಕಿದಾರ ಹೇಗಾಗ್ತೀರಾ?

ಚಿಕ್ಕಮಗಳೂರು: ಒಂದೆಡೆ ಕೋಮುವಾದವನ್ನ ಪ್ರಮೋಟ್ ಮಾಡ್ತಿದ್ದೀರಾ, ಮತ್ತೊಂದೆಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದೀರಾ, ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ ಎಂದು ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಒಂದೆಡೆ ಕೋಮುವಾದವನ್ನ ಪ್ರಮೋಟ್ ಮಾಡ್ತಿದ್ದೀರಾ, ಮತ್ತೊಂದೆಡೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದೀರಾ, ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮಿಸ್ಟರ್ ನರೇಂದ್ರ ಮೋದಿಯವ್ರೆ ನೀವು ಚೌಕಿದಾರ ಹೇಗಾಗ್ತೀರಾ? ಭ್ರಷ್ಟಾಚಾರದಲ್ಲಿ ಪಾಲುದಾರರಾಗಿರೋ ಮೋದಿಗೆ ಮತ್ತೆ ಪ್ರಧಾನಿ ಮಾಡ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಮೋದಿ ಹೇಳಿದ ಮೇಲೆ ಆ ಯಡಿಯೂರಪ್ಪ, ಶೋಭಾ ಎಲ್ಲರೂ ನಾನು ಚೌಕಿದಾರ್ ಅಂತಿದ್ದಾರೆ. ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಎಲ್ಲರೂ ಜೈಲಿಗೆ ಹೋಗಿ ಬಂದೋರು. ಜೈಲಿಗೆ ಹೋಗಿ ಬಂದೋರೆಲ್ಲಾ ಚೌಕಿದಾರರಾದ್ರೆ ನಾವೆಲ್ಲಾ ಏನು ಎಂದು ಪ್ರಶ್ನೆ ಮಾಡಿದರು. ನನ್ನ ಪ್ರಕಾರ ಆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಗ್ರಾಮ ಪಂಚಾಯಿತಿ ಮೆಂಬರ್ ಆಗೋದಕ್ಕೂ ನಾಲಾಯಕ್ ಎಂದು ಕಿಡಿಕಾರಿದರು.

ಮೋದಿಯಂತ ಡೊಂಗಿ ರಾಜಕಾರಣಿಯನ್ನ ದೇಶದ ಇತಿಹಾಸದಲ್ಲಿ ಇಂದಿಗೂ ನಾನು ನೋಡಿಲ್ಲ. ನಿಮಗೆ ಬರೀ ಜೆಡಿಎಸ್-ಕಾಂಗ್ರೆಸ್ಸಿಗರೇ ಕಾಣೋದಾ? ಯಡಿಯೂರಪ್ಪ, ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆ ಅವರ ಮನೆ ಮೇಲೆ ಯಾಕೆ ಐಟಿ ದಾಳಿಯಾಗಿಲ್ಲ? ಇವರೆಲ್ಲಾ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಒಂದು ರಾಷ್ಟ್ರ, ಭಾಷೆ, ಧರ್ಮ ಅಂತ ಅಮಿತ್ ಶಾ ಹೇಳುತ್ತಾನೆ. ಹಾಗಾದರೆ ಹಿಂದು, ಬೌದ್ದ ಹಾಗೂ ಸಿಖ್‍ರು ಮಾತ್ರ ಈ ದೇಶದಲ್ಲಿ ಇರಬೇಕು. ಬೇರೆಯವರು ಎಲ್ಲಿಗೆ ಹೋಗಬೇಕು. ಈ ಗಿರಾಕಿ ಜೈಲಿಗೆ ಹೋಗಿ ಬಂದವ. ಮರ್ಡರ್ ಕೇಸಲ್ಲಿ ಸಿಕ್ಕಿಬಿದ್ದು ಮೂರು ವರ್ಷ ಜೈಲಿನಲ್ಲಿದ್ದ ಎಂದು ಅಮಿತ್ ಶಾ ವಿರುದ್ಧ ಏಕವಚನದಲ್ಲಿ ಹರಿಹಾಯ್ದರು.

Comments

Leave a Reply

Your email address will not be published. Required fields are marked *