‘ಪಯಣಿಗರು’ ಪಯಣ ಏಪ್ರಿಲ್ 17ಕ್ಕೆ ಶುರು

ಬೆಂಗಳೂರು: ಕೋಳನ್‍ಕಲ್ ಮಹಾಗಣಪತಿ ಪ್ರೊಡಕ್ಷನ್ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ‘ಪಯಣಿಗರು’ ಚಿತ್ರವು ಇದೇ ಏಪ್ರಿಲ್ 17ರ ಬುಧವಾರ ಬಿಡುಗಡೆಯಾಗುತ್ತಿದೆ. ಜೀವನದಲ್ಲಿ ಸುಖ-ದುಃಖಗಳನ್ನೆಲ್ಲಾ ಅನುಭವಿಸಿ ನೆಮ್ಮದಿ ಪಡೆಯಲು ಗೋವಾ ಟ್ರಿಪ್ ಹೊರಡುವ ನಾಲ್ವರು ಗೆಳೆಯರು ಅಲ್ಲಿ ಏನೆಲ್ಲಾ ಅನುಭವಿಸುತ್ತಾರೆ ಎನ್ನುವ ಕಥಾಹಂದರವಿರುವ ಈ ಚಿತ್ರವನ್ನು ಡೀಲ್ ರಾಜ, ಸಡಗರ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜ್ ಗೋಪಿ ನಿರ್ದೇಶನ ಮಾಡಿದ್ದಾರೆ.

ವಿನುಮನಸ್ಸು ಸಂಗೀತ, ರಾಜಶಿವಶಂಕರ್ ಛಾಯಾಗ್ರಹಣ, ರವಿಚಂದ್ರಕುಮಾರ್ ಸಂಕಲನ, ಕೆ.ಕಲ್ಯಾಣ ಸಾಹಿತ್ಯ, ರಾಜಗೋಪಿ ಸಂಭಾಷಣೆ ರಚಿಸಿದ್ದಾರೆ. ಲಕ್ಷ್ಮಣ್, ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ನಾಯಕ್, ಸುಧೀರ್ ಮೈಸೂರು, ರಾಘವೇಂದ್ರ ಬೂದನೂರು, ನಾಗರಾಜರಾವ್, ಸುಜಾತ, ಭಾಸ್ಕರ್ ಕೆ.ಆರ್, ರಘುಕುಮಾರ್, ಚೇತನ್ ಮುಂತಾದವರ ತಾರಾಬಳಗವಿದೆ.

Comments

Leave a Reply

Your email address will not be published. Required fields are marked *