ಸುಡು ಬಿಸಿಲು ಲೆಕ್ಕಿಸದೇ ಪತಿರಾಯರ ಪರ ಪ್ರಚಾರ ಆರಂಭಿಸಿದ ಪತ್ನಿಯರು

ಬೀದರ್: ಸುಡು ಬಿಸಿಲನ್ನೂ ಲೆಕ್ಕಿಸದೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪತ್ನಿಯರು ಪ್ರಚಾರ ಆರಂಭಿಸಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಅವರ ಪತ್ನಿಯರು ಫೀಲ್ಡಿಗೆ ಇಳಿದು ಮತ ಬೇಟೆಯಲ್ಲಿ ತೊಡಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ನಿ ಡಾ. ಗೀತಾ ಖಂಡ್ರೆ ಪ್ರತಿ ಮನೆ-ಮನೆಗೆ ತೆರಳಿ ಪತಿ ಪರ ಮತ ಹಾಕುವಂತೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ಈ ಕಡೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪತ್ನಿ ಶೀಲಾ ಖೂಬಾ ಕೂಡ ಮಹಿಳಾ ತಂಡದ ಜೊತೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ. ಪತಿ ಭಗವಂತ್ ಖೂಬಾ ಪರ ಮತ ಹಾಕಿ ಎಂದು ಶೀಲಾ ಖೂಬಾ ಪ್ರಚಾರ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *