ಸೇಫ್ಟಿ ಇರಲೆಂದು ಯಶ್‍ಗೆ ನಿಂಬೆಹಣ್ಣು ಕೊಟ್ಟ ಅಭಿಮಾನಿ

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇಂದು ಹಳ್ಳಿಕೆರೆಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಅಭಿಮಾನಿಯೋರ್ವ ಯಶ್ ಅವರಿಗೆ ಸೇಫ್ಟಿಗೆ ನಿಂಬೆಹಣ್ಣನ್ನು ನೀಡಿದ್ದಾರೆ.

ಪ್ರಚಾರದ ವೇಳೆ ಜನರನ್ನುದ್ದೆಶಿಸಿ ಯಶ್ ಮಾತನಾಡುತ್ತಿದ್ದರು. ಈ ವೇಳೆ ಅವರಿಗೆ ಅಭಿಮಾನಿಯೋರ್ವ ನಿಂಬೆಹಣ್ಣು ನೀಡಿದ್ದಾನೆ. ಅದನ್ನು ನೋಡಿ ತಕ್ಷಣ, ಯಾಕೋ ನಿಂಬೆಹಣ್ಣು ಸೇಫ್ಟಿಗಾ? ಎಂದು ಜನರ ಮುಂದೆ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತೋರಿಸಿದರು. ಬಳಿಕ ಜನರ ಪ್ರೀತಿ ಇರುವವರೆಗೂ ಇದ್ಯಾವುದೂ ಬೇಡ ಬಿಡ್ರೋ ಅಂತ ಹೇಳಿ, ಪ್ರಚಾರ ಕಾರ್ಯ ಮುಂದುವರಿಸಿದರು.

ನಿಖಿಲ್ ಪ್ರಚಾರದ ಸಮಯದಲ್ಲೂ ಅಭಿಮಾನಿಗಳು ನಿಂಬೆಹಣ್ಣನ್ನು ನೀಡಿದ ಪ್ರಸಂಗ ಇಂದು ನಡೆಯಿತು.

Comments

Leave a Reply

Your email address will not be published. Required fields are marked *