ನಿಖಿಲ್ ಗೆಲುವಿಗೆ ಬಸವ ಆಶೀರ್ವಾದ!

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರೋ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್‍ ಕುಮಾರಸ್ವಾಮಿಗೆ  ದೇವರ ಆಶೀರ್ವಾದ ಸಿಕ್ಕಿದೆ.

ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿಖಿಲ್, ಭಾನುವಾರ ಮದ್ದೂರು ತಾಲೂಕಿನ ಹೊನ್ನನಾಯ್ಕನಹಳ್ಳಿ ಗ್ರಾಮದ ಮಂಟೇಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಸವ ನಿಖಿಲ್ ಅಂಗೈ ಮೇಲೆ ಪಾದವಿಟ್ಟು ಆಶೀರ್ವಾದ ಮಾಡಿದ್ದಾನೆ.

ಆರಂಭದಲ್ಲಿ ಬಸವನಿಗೆ ಹೆದರಿದ ನಿಖಿಲ್‍ಗೆ ಸ್ಥಳೀಯರು ಹೆದರದಂತೆ ಧೈರ್ಯ ಹೇಳಿದ್ರು. ಬಳಿಕ ನಿಖಿಲ್ ಧೈರ್ಯವಾಗಿ ಬಸವನ ಬಳಿ ಆಶೀರ್ವಾದ ಪಡೆದ್ರು. ಅಂಗೈ ನೀಡಿ ಬಸವನ ಆಶೀರ್ವಾದ ಬೇಡುವುದು ಇಲ್ಲಿಯ ವಾಡಿಕೆಯಾಗಿದೆ.

ಇದಕ್ಕೂ ಮೊದಲು ನಿಖಿಲ್ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ರು. ಸೋಮನಹಳ್ಳಿಯ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಪಟಾಕಿ ಸಿಡಿಸಿ ನಿಖಿಲ್‍ರನ್ನು ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಮನೆ ಮನೆಗೆ ತೆರಳಿ ಮತಯಾಚಿಸಿದ್ರು.

Comments

Leave a Reply

Your email address will not be published. Required fields are marked *