ಹೃದಯ ಶಸ್ತ್ರಚಿಕಿತ್ಸೆಗೆ ಸಿಎಂ ನೆರವು – ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದ ಬಾಲಕಿ

ಮಂಡ್ಯ: ತನ್ನ ಹೃದಯ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದ ಸಿಎಂ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಲು, ಬಾಲಕಿಯೊಬ್ಬಳು ಜೆಡಿಎಸ್ ಬಹಿರಂಗ ಸಭೆಗೆ ರಾಗಿಯ ಹೊರೆ ಹೊತ್ತು ಬಂದು ನೆರೆದವರ ಗಮನ ಸೆಳೆದಿದ್ದಾಳೆ.

ಹೊಸಕೋಟೆಯ ಹೆಮ್ಮಂಡಳ್ಳಿಯ ನಿವಾಸಿ ಸಂಪಂಗಿ, ಸಂಧ್ಯಾರಾಣಿ ದಂಪತಿ ಪುತ್ರಿ ಮೋನಿಕಾಗೆ ಸಿಎಂ ಹೃದಯ ಶಸ್ತ್ರಚಿಕಿತ್ಸೆಗೆ ಹಣ ನೀಡಿ ಜೀವ ಉಳಿಸಿದ್ದರು. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಹೃದಯ ಶಸ್ತ್ರಚಿಕತ್ಸೆ ಮಾಡಿಸಲು ಸಿಎಂ ನೆರವಾಗಿದ್ದರು. ಸಿಎಂ ಮಾಡಿದ ಸಹಾಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಇಂದು ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಈ ವೇಳೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮೋನಿಕಾ ಜೆಡಿಎಸ್ ಚಿಹ್ನೆ ಆಗಿರುವ ತೆನೆ ಹೊತ್ತ ಮಹಿಳೆ ರೀತಿ ಬಂದು ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದ್ದಾಳೆ.

Comments

Leave a Reply

Your email address will not be published. Required fields are marked *