ಪಿಎಸ್‍ಐಗೆ ಚಾಕುವಿನಿಂದ ಹಲ್ಲೆ- ರೌಡಿಶೀಟರ್ ಮೇಲೆ ಗುಂಡಿನ ದಾಳಿ

ಬೆಂಗಳೂರು: ಬೆಳ್ಳಂಬೆಳಗ್ಗೆ ನಗರದದಲ್ಲಿ ಪೊಲೀಸರ ಗುಂಡಿನ ಸದ್ದು ಕೇಳಿದ್ದು, ನಟೋರಿಯಸ್ ರೌಡಿಶೀಟರ್ ಮೇಲೆ ದಾಳಿ ನಡೆಸಲಾಗಿದೆ.

ರೌಡಿಶೀಟರ್ ಜಯಂತ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ನೆಲಮಂಗಲ ತಾಲೂಕಿನ ವೀರನಂಜೀಪುರ ಗೇಟ್ ಬಳಿ ಪಿಎಸ್ ಐ ಶಂಕರ್ ನಾಯಕ್ ಈ ಫೈರಿಂಗ್ ಮಾಡಿದ್ದಾರೆ.

ಪೊಲೀಸರು ಜಯಂತ್ ನನ್ನು ಬಂಧಿಸಲು ಹೋದಾಗ ಆತ ಪಿಎಸ್‍ಐ ಕುಮಾರಸ್ವಾಮಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಜಯಂತ್ ಬಲಗಾಲಿಗೆ ಗಾಯಗಳಾಗಿವೆ.

ದಾಳಿಯಿಂದ ಗಾಯಗೊಂಡಿರುವ ಜಯಂತ್ ಗೆ ನೆಲಮಂಗಲದ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್ ಐ ಕುಮಾರಸ್ವಾಮಿಯವರ ಎಡಗೈಗೆ ಗಾಯವಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೌಡಿ ಶೀಟರ್ ಮೇಲೆ ಸುಮಾರು 25 ಕೇಸ್ ಗಳಿ ಇವೆ. ಡಕಾಯಿತಿ, ಸುಲಿಗೆ ಸೇರಿ ನೆಲಮಂಗಲ ಭಾಗದ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

Comments

Leave a Reply

Your email address will not be published. Required fields are marked *