ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

ಬೆಂಗಳೂರು: ಉದ್ಘರ್ಷ.. ಉದ್ಘರ್ಷ.. ಉದ್ಘರ್ಷ.. ಇನ್ನೇನು ಇದೇ ಶುಕ್ರುವಾರ ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ ಗಳು ಸಹ ಉದ್ಘರ್ಷ ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಬಹಳ ದಿನಗಳ ನಂತರ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ದೇಸಾಯಿ ನಿರ್ದೇಶಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರ ಬಿದ್ದಾಗಿನಿಂದಲೇ ಉದ್ಘರ್ಷ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಮನೆ ಮಾಡಿತ್ತು. ಅಲ್ಲದೇ ರಕ್ತ ಸಿಕ್ತ ಹುಡುಗಿಯ ಕಾಲಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ದೇಸಾಯಿ, ಉದ್ಘರ್ಷ ಚಿತ್ರದ ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಳಿ ಧ್ವನಿ ಕೊಡಿಸಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದರು. ನಂತರ ಆ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ಮತ್ತೊಂದು ಕಿಕ್ ಕೊಟ್ಟಿತ್ತು.

ಈಗ ವಿಶೇಷ ಅಂದ್ರೆ ಟ್ರೇಲರ್ ನೋಡಿ ಫುಲ್ ಫಿದಾ ಆಗಿರೋ ಸೆಂಚುರಿ ಸ್ಟಾರ್ ಶಿವಣ್ಣ, ದೇಸಾಯಿ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, ದೇಸಾಯಿಯವರ ನಮ್ಮೂರ ಮಂದಾರ ಹೂವೆ ಹಾಗೂ ಪ್ರೇಮರಾಗ ಹಾಡು ಗೆಳತಿ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿರೋ ಶಿವಣ್ಣ, ಉದ್ಘರ್ಷ ಮೂಲಕ ದೇಸಾಯಿ ಈಸ್ ಬ್ಯಾಕ್ ಅಂತಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *