ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರಿಯೇಟಿವ್ ನಿರ್ದೇಶಕ. ಕನ್ನಡದಲ್ಲಿ ಒಂದು ಬಗೆಯ ಚಿತ್ರಗಳು ಮಾತ್ರವೇ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಏಕಾಏಕಿ ಥ್ರಿಲ್ಲರ್ ಚಿತ್ರಗಳ ಮೂಲಕ ಅಚ್ಚರಿ ಹುಟ್ಟಿಸಿದ್ದವರು ದೇಸಾಯಿ. ಇದೀಗ ಅವರು ನಿರ್ದೇಶನ ಮಾಡಿರುವ ಉದ್ಘರ್ಷ ಇದೇ ಮಾರ್ಚ್ 22ರಂದು ತೆರೆ ಕಾಣಲು ರೆಡಿಯಾಗಿದೆ.
ದೇಸಾಯಿಯವರು ಈ ಸಿನಿಮಾ ಆರಂಭಿಸಿದಾಗಲೇ ಸುದ್ದಿ ಶುರುವಾಗಿತ್ತು. ಯಾಕೆಂದರೆ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಮತ್ತೆ ಮರಳಿದ್ದಾರೆಂದರೆ ಅಂಥಾ ಸಂಚಲನ ಸೃಷ್ಟಿಯಾಗೋದು ಸಹಜವೇ. ಒಟ್ಟಾರೆಯಾಗಿ ಈ ಚಿತ್ರದ ಅಂತರಾಳ ಏನನ್ನೋದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಸಾಕ್ಷಿಯಾಗಿದೆ.

ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಕಡಿಮೆ ಅವಧಿಯಲ್ಲಿಯೇ ಟ್ರೆಂಡ್ ಸೆಟ್ ಮಾಡಿತ್ತು. ಗಾಢವಾದ ಕುತೂಹಲ ಮತ್ತು ಬಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂಥಾ ತಾಂತ್ರಿಕ ಶ್ರೀಮಂತಿಕೆಯೂ ಈ ಮೂಲಕವೇ ಪ್ರೇಕ್ಷಕರ ಅರಿವಿಗೆ ಬಂದಿತ್ತು. ಈ ಟ್ರೈಲರ್ ನೋಡಿ ಬಿಡುಗಡೆ ಮಾಡಿರೋ ದರ್ಶನ್ ಅವರೇ ಥ್ರಿಲ್ ಆಗಿದ್ದಾರೆ.
ದೇಸಾಯಿಯವರು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲೊಂದು ಹೊಸತನವಿರುತ್ತೆ. ಉದ್ಘರ್ಷ ಕೂಡಾ ಅಂಥಾದ್ದೇ ಹೊಸತನದಿಂದ ಕೂಡಿರೋ ಸುಳಿವು ಸಿಕ್ಕಿದೆ. ಈ ಸಿನಿಮಾ ಕೂಡಾ ಸೂಪರ್ ಹಿಟ್ ಆಗಲಿ ಅಂತ ದರ್ಶನ್ ಹಾರೈಸಿದ್ದಾರೆ. ದರ್ಶನ್ ಅವರೇ ಮೆಚ್ಚಿಕೊಂಡಿರೋ ಈ ಚಿತ್ರವೀಗ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೆ ಅಣಿಗೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply