ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ – ಸಚಿವ ಡಿ.ಸಿ ತಮ್ಮಣ್ಣ

ಬೆಂಗಳೂರು: ಮಂಡ್ಯಕ್ಕೆ ಹಾಲಿ ಸಂಸದ ಶಿವರಾಮೇಗೌಡ, ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಅಶ್ವಿನ್ ಗೌಡರಿಗಿಂತ ನಿಖಿಲ್ ಅರ್ಹ ಅಭ್ಯರ್ಥಿ. ನಮ್ಮ ಮನೆಯವರು ನಿಂತುಕೊಳ್ಳೋದು ತಪ್ಪಲ್ಲ ಅಂತ ಸಾರಿಗೆ ಸಚಿವ ಡಿಸಿ ತಮ್ಮಣ್ಣ, ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದಾರೆ.

ಮಂಡ್ಯದಲ್ಲಿ ನಿಖಿಲ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಿಖಿಲ್ ಅಭ್ಯರ್ಥಿ ಎಂದು ದೇವೇಗೌಡರೇ ಘೋಷಣೆ ಮಾಡಿದ್ದಾರೆ. ಸೂಕ್ತ ಅಭ್ಯರ್ಥಿ ಇದ್ದರೆ ಕುಟುಂಬದಲ್ಲೇ ಯಾಕೆ ಟಿಕೆಟ್ ಕೊಡಬಾರದು ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯದಲ್ಲಿ ಬೇರೆ ಅವರನ್ನು ಕರೆದುಕೊಂಡು ಬಂದು ಗೆಲ್ಲಿಸಿಲ್ವಾ, ಸುಷ್ಮಾ ಸ್ವರಾಜ್, ಸೋನಿಯಾ ಗಾಂಧಿ ಹೀಗೆ ಬೇರೆ ರಾಜ್ಯದವರನ್ನ ಗೆಲ್ಲಿಸಿಲ್ವಾ ಅಂತ ಪ್ರಶ್ನೆ ಮಾಡಿದ್ರು.

ಹಾಲಿ ಸಂಸದ ಶಿವರಾಮೇಗೌಡ, ಆಶ್ವಿನಿಗೌಡ ಗಿಂತ ನಿಖಿಲ್ ಅವರೇ ಅರ್ಹ ಅಭ್ಯರ್ಥಿ. ನಿಖಿಲ್ ನಿಲ್ಲೋದು ತಪ್ಪಲ್ಲ. ಹಾಸನ, ಮಂಡ್ಯ, ಮೈಸೂರು ನಮ್ಮ ಮನೆ ಇದ್ದ ಹಾಗೆ. ನಮ್ಮ ಮನೆಯಲ್ಲಿ ನಾವು ಅಭ್ಯರ್ಥಿ ಹಾಕಿಕೊಳ್ತೀವಿ. ಉತ್ತರ ಕರ್ನಾಟಕಕ್ಕೆ ನಾವು ಹೋದ್ರೆ ಪ್ರಶ್ನೆ ಮಾಡಬೇಕು. ನಮ್ಮ ಮನೆಯಲ್ಲಿ ನಿಂತ್ರೆ ಏನು ಸಮಸ್ಯೆ ಅಂತ ನಿಖಿಲ್ ಸ್ಪರ್ಧೆಯನ್ನ ಸಮರ್ಥನೆ ಮಾಡಿಕೊಂಡರು

ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಅರ್ಹತೆ ಇರೋರು ಸ್ಪರ್ಧೆ ಮಾಡಬಹುದು. ಬೇಡ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿ ಸುಮಲತಾಗೆ ಟಾಂಗ್ ಕೊಟ್ರು.

ನಮ್ಮದು ಆರಂಭದಿಂದಲೂ ಕುಟುಂಬ ರಾಜಕಾರಣ ಇದೆ. ಅನೇಕರು ವಿರೋಧ ಮಾಡ್ತಾನೆ ಇದ್ದಾರೆ. ಇಷ್ಟೆಲ್ಲ ಆದ್ರೂ ನಾವು ಗೆದ್ದು ಬರುತ್ತಿಲ್ವಾ ಎಂದು ಕುಟುಂಬ ರಾಜಕಾರಣವನ್ನು ಸಮರ್ಥನೆ ಮಾಡಿಕೊಂಡ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *