ಪಾಪ 60 ವರ್ಷದಿಂದ ಯಾರೂ ಏನೂ ಮಾಡಿಲ್ಲ, ಎಲ್ಲ ಬಿಜೆಪಿಯವ್ರೇ ಮಾಡಿದ್ದು- ಡಿಕೆಶಿ

ರಾಮನಗರ: ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಬ್ದಾರಿಯಾಗಿದೆ. ಆದ್ರೆ ಬಿಜೆಪಿಯವರು ಎಲ್ಲ ನಾವೇ ಮಾಡ್ತಿದ್ದೇವೆ ಎಂದು ಹೇಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರೂ ಏನೂ ಮಾಡಿಲ್ಲ ಅವರೇ ಎಲ್ಲ ಮಾಡ್ತಿದ್ದಾರೆ ಎಂದು ಪಾಕಿಸ್ತಾನದ ಮೇಲಿನ ದಾಳಿಯ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕನಕಪುರದಲ್ಲಿ ಜಿಲ್ಲಾಡಳಿ ಹಾಗೂ ಇನ್ಫೋಸಿಸ್ ವತಿಯಿಂದ ನಡೆದ ಸುಸಜ್ಜಿತ 122 ಹಾಸಿಗೆಗಳ ಆಸ್ಪತ್ರೆಯ ಗುದ್ದಲಿಪೂಜಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ರು. ಇದೇ ವೇಳೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹತ್ತಿರ ಬರ್ತಿದೆ. ಬಹಳ ದೊಡ್ಡ ದೊಡ್ಡ ವ್ಯಾಖ್ಯಾನಗಳಾಗುತ್ತಿವೆ. ನಮ್ಮ ಯೋಧರು, ಏರ್ ಫೋರ್ಸ್ ನವರೆಲ್ಲ ಪಾಕಿಸ್ತಾನಕ್ಕೆ ತಿರುಗೇಟು ನೀಡುತ್ತಿದ್ದಾರೆ ಅಂದ್ರು.

ದೇಶ ರಕ್ಷಣೆ ಮಾಡಬೇಕಾದ್ದು ಎಲ್ಲ ಪಕ್ಷದ ರಾಜಕಾರಣಿಗಳ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ ಎಂದು ಅಂದುಕೊಂಡಿದ್ದೇನೆ. ಬಿಜೆಪಿ ಪಕ್ಷದವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡ್ತಿದ್ದು ಎಲ್ಲ ನಾವೇ ಮಾಡಿದ್ದೇವೆ ಎಂದು ಹೇಳಿಕೊಳ್ತಿದ್ದಾರೆ. ಪಾಪ 60 ವರ್ಷಗಳಿಂದ ಯಾರು ಏನೂ ಮಾಡ್ಲಿಲ್ಲ, ಎಲ್ಲ ಅವರೇ ಮಾಡ್ತಿದ್ದಾರೆ ಎಂದು ತಿಳಿಸಿದ್ರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಮಾತನಾಡಿ, ದೇಶದ ಭದ್ರತೆ ವಿಚಾರ ಬಂದಾಗ ಇಡೀ ದೇಶ ಒಂದು. ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧರಿದ್ದೇವೆ. ಪಾಕಿಸ್ತಾನದ ಹೆದರಿಕೆ ಬೆದರಿಕೆಗೆ ಬಗ್ಗುವಂತಹ ಪ್ರಶ್ನೆಯಿಲ್ಲ. ನಮ್ಮಲ್ಲೂ ಕೂಡಾ ಎಲ್ಲಾ ರೀತಿಯ ತಯಾರಿ ಇದೆ. ಅದು ಹಿಂದಿನಿಂದಲೂ ಇಂದಿರಾಗಾಂಧಿ, ನೆಹರೂ, ವಾಜಪೇಯಿರವರ ಕಾಲದಲ್ಲೂ ಯುದ್ಧ ಮಾಡಿದ್ದು ಗೆದ್ದಿದ್ದೇವೆ. ಹಾಗಾಗಿ ಯುದ್ಧವನ್ನ ನಾವು ಬಯಸುವುದಿಲ್ಲ. ಅವರು ಮಾಡಬೇಕು ಅಂದ್ರೆ ನಾವು ಸುಮ್ಮನೆ ಕೂರಲಾಗುವುದಿಲ್ಲ ಎಂದು ತಿಳಿಸಿದ್ರು.

ದಕ್ಷಿಣ ಭಾರತದವರೆಗೆ ಪಾಕಿಗಳು ಬರುವುದು ಕಷ್ಟ. ಏನಿದ್ರೂ ಪಂಜಾಬ್ ವರೆಗೆ 500 ಕಿ.ಮೀ, ಇಲ್ಲವೇ 300 ಕಿಮೀ ಹತ್ತಿರದವರೆಗೆ ಶಕ್ತಿಯಿರಬೇಕೆ ಹೊರತು ದೆಹಲಿ ದಾಟುವುದು ಕಷ್ಟ. ಅಷ್ಟರಲ್ಲಿ ಪಾಕಿಸ್ತಾನವೇ ಇರುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *